ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ನೂತನ ಪದಾಧಿಕಾರಿಗಳ ಸಭೆಯು ಒಕ್ಕೂಟದ ಕಚೇರಿಯಲ್ಲಿ ಜರಗಿತು.
![](https://blogger.googleusercontent.com/img/b/R29vZ2xl/AVvXsEj9WmlU2guROzZATAFLzT5ig4zajt2zA8HLaGHA66jgXpXJzkpIr10vc5VOZMfWBRJ9OYWR2osCjfMr425e49EnJgJFGLLKFzAKuZ5wtxQWVkO4q_h8u496iCuz_aay0FI9TxZ7Jr1y4HPrIYhXR4UUp9hzk4V4KNl26n5M5WbSlR_UickbIPjW7PoGEw/s16000/IMG_20221005_190907_copy_640x374.jpg)
![](https://blogger.googleusercontent.com/img/b/R29vZ2xl/AVvXsEjovQVZCn7Kdme4DnL_LJ-hCbypIfJ8BsP8gEQnb0ehHs7PdgkRYKkJXZMPFeA1Mh_XcYK0qLIhwFlURm-cul0XGU6rBGi8msdj6Cj-B2OPs0cdSbfxfwAaiyTndiFTwi6C6ttlv5-AbCPveiqk-jr9laDdflQBm10JX_bQWV2NRHyd6YUxDx8C12ufoQ/s16000/IMG_20221005_185833_copy_640x427.jpg)
![](https://blogger.googleusercontent.com/img/b/R29vZ2xl/AVvXsEiIfDvdVL2ybUR3A4z_P7bDZqR7G4D_rnFWj-WacVo2zXyR6Rtke-Gr53FLlMOgzFAsx-VYppBYPX1ba1Sqmvg5oV1GkQtP3rtXMfV1VI7iPeGlXh7RrY_Qr2La6Hy3ItszjnFk9nwniK_dXcZ0KMSbfwW5HwJH-evtRwzTpAZPLyVZqEIo5P5z40GFZg/s16000/IMG_20221005_185849_copy_640x426.jpg)
![](https://blogger.googleusercontent.com/img/b/R29vZ2xl/AVvXsEjmxzr1PXwxtm2wcJpLdMYNZuJMk2isZeXb0tJulv9ubI7cJ_lE94epbH-jRSpXoq-O_ZQiZc7ymYzTtketiARBKpjgSUTVuK7qnTLDcJE1R4-paQCOEjARN9ZqDzhJvjBpxdRYe4c8aa36nsiA8SGbEgF1yK-c49_q5IC6JSs4W18qgcCq30Sn_1-Hug/s16000/IMG_20221005_190827_copy_640x386.jpg)
![](https://blogger.googleusercontent.com/img/b/R29vZ2xl/AVvXsEhMCwk2IaUpW9_gF_hBxmfVsdcPN1jzKeOm9U_awPgY5g4TiXu4LFmD8lNN5Yo8HsHmIpJNwo_xzWfBDubrHJYEtZg0wFyxDCmI4-kdZfjtwPALTHf3w4Ok-j8NfO1b2A4FnUldKYnz5E8Zvm3bnQ1m1NCNhCftrfX4AHXsHTaHdHgrvZ6raDFYT6ACGg/s16000/IMG_20221005_190907_copy_640x374.jpg)
ಸಭೆಯಲ್ಲಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸುಮಾರು 65 ಸೆಂಟ್ಸ್ ಜಮೀನನ್ನು ಖರೀದಿಸುವ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಕಟ್ಟಡಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಶ್ರೀ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣವೆಂದು ನಾಮಕರಣ ಮಾಡುವುದಾಗಿ ನಿರ್ಣಯಿಸಲಾಯಿತು.
ಈ ಬಗ್ಗೆ ಸದಾಶಿವ ಶೆಟ್ಟಿ ಅವರು ತಮ್ಮ ಸಮ್ಮತಿಯನ್ನು ನೀಡಿದರು. ಸದಾಶಿವ ಶೆಟ್ಟಿಯವರ ಕೊಡುಗೆಯು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಕಾಶೆಯಲ್ಲಿ ಮೂಡಿಬರುವುದಾಗಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಸದಾಶಿವ ಶೆಟ್ಟಿ ಅವರು ಒಕ್ಕೂಟದ ನಿರ್ದೇಶಕರಾಗಿ, ಮಹಾದಾನಿಗಳಾಗಿ ಒಕ್ಕೂಟದ ಜನಪರ ಕಾರ್ಯಗಳಿಗೆ ಪೂರ್ಣ ಪ್ರಮಾಣದ ಸಹಕಾರವನ್ನು ನೀಡುವುದರ ಮೂಲಕ ಒಕ್ಕೂಟಕ್ಕೆ ಬಲ ತುಂಬಿದ್ದಾರೆ ಇಂತಹ ಆದರ್ಶ ವ್ಯಕ್ತಿತ್ವವನ್ನು ಹೊಂದಿರುವ ಕನ್ಯಾನ ಸದಾಶಿವ ಶೆಟ್ಟಿ ಅವರು ಸಿಕ್ಕಿದ್ದು ನಮ್ಮ ಪೂರ್ವಜನ್ಮದ ಪುಣ್ಯದ ಫಲ. ಶ್ರೀದೇವಿಯ ಅಪಾರ ಭಕ್ತಿಯನ್ನು ಇಟ್ಟುಕೊಂಡಿರುವ ಸದಾಶಿವ ಶೆಟ್ಟಿ ಅವರು ಸಮಾಜದ ಬಗ್ಗೆ ಕಾಳಜಿಯಿಂದ ನೋಂದವರ ಬಗ್ಗೆ ಕನಿಕರದಿಂದ ತಾನು ಮಾಡುವ ದಾನವು ಭಗವಂತನ ಪಾದ ಸೇರಲಿ ಎಂಬ ಅಭಿಲಾಷೆಯನ್ನು ಇಟ್ಟುಕೊಂಡು ಉತ್ಕೃಷ್ಟ ಮಟ್ಟದ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಅವರನ್ನು ಶ್ರೀದೇವಿಯು ಸದಾ ಹರಸಲಿ ಮತ್ತು ಸಮಾಜಕ್ಕೆ ಅವರ ಕೊಡುಗೆ ಇನ್ನಷ್ಟು ಹರಿದು ಬರಲಿ ಎಂದು ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಮತ್ತು ಸಮಾಜದ ಪರವಾಗಿ ವಿನಮ್ರವಾಗಿ ಶ್ರೀ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಈ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಶಶಿಧರ ಶೆಟ್ಟಿ ಇನ್ನಂಜೆ, ಅರುಣ್ ಶೆಟ್ಟಿ, ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಸುರೇಶ್ ಶೆಟ್ಟಿ ಸೂರಿಂಜೆ ಉಪಸ್ಥಿತರಿದ್ದರು.