ಎಂಆರ್'ಜಿ ಗ್ರೂಪಿನಿಂದ ಗೌರವ
ಮಂಗಳೂರು: ಕೇಂದ್ರ ಸರಕಾರದಿಂದ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರನ್ನು ಎಂ ಆರ್ ಜಿ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅವರು ಶ್ರೀ ಕ್ಷೇತ್ರದಲ್ಲಿ ಗೌರವಿಸಿ ಅಭಿನಂದಿಸಿದರು.
![](https://blogger.googleusercontent.com/img/b/R29vZ2xl/AVvXsEjgg_OjWX5_Qe_-fUoLIT47VFFbIdkMe5uUmNwB2Fjt74AFj-h0nXGtNxgTydBsl3-eFkyXcKZd7Ok509dmXUpoYhvnxme7HMWp8zsuG8bwB9yGQXhvhDvhwc9rHyVWuuIo93tGYW5HFCwXt1QsM6fxGUMyQuvj-sxH4Wx-63jRgdWsgThMMwip96xLcw/s16000/IMG_20220719_165254_copy_640x367.jpg)
![](https://blogger.googleusercontent.com/img/b/R29vZ2xl/AVvXsEi-WFq6I2x-wn1-4A_DSo9H7cYpeHUHdwXjFzVFSb3FYDCT9NEi9na2XdgmNmnUq0izL3EHALJGdfXHJ14wr7Lu3zAYDkxEwyZeeYv2L8K8saxNawQBpiQ-WdvKcl2aJ0VxJ0XaPRwhwjgvIdQN6v-4zMOMSxw-wxMikcOspDEr_w6f1DF5ueEDu9lpAw/s16000/IMG_20220719_165214_copy_640x460.jpg)
![](https://blogger.googleusercontent.com/img/b/R29vZ2xl/AVvXsEg2ZhwQZOihCX0xO5Yc6Jm-qbOQDrN1ANPSsd4RIDXxFuLXs_nhGT6Qq9bCTcrU4OXI0ezAgu-f1fOHKyACDpeDGfjO5lsdJ9oxT3BhWtIGERWpVPyqaKhndXmuEecy1ymIHFZL8emkHzeAYI9JCD6MVggRIAOe3cP0f_gSTJmTlvg7jmoSz7XlSEzrJA/s16000/IMG_20220719_165254_copy_640x367.jpg)
ಗ್ರಾಮ ಅಭಿವೃದ್ದಿಯಲ್ಲಿ ಹೊಸ ಚಿಂತನೆಯನ್ನು ಅಳವಡಿಸಿ ತಮ್ಮದೇ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಗ್ರಾಮಗಳಲ್ಲಿ ನವ ಚೈತನ್ಯ ಮೂಡಲು ಕಾರಣರಾದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು. ಸ್ವ ಉದ್ಯೋಗ ತರಬೇತಿಗಾಗಿ ರುಡ್ ಸೆಟ್, ಅರಣ್ಯೀಕರಣ, ಮುಕ್ತಿಧಾಮ, ಕೆರೆ ಸಂವರ್ಧನೆ, ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ, ಶಿಕ್ಷಣ, ಆರೋಗ್ಯ - ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾರ್ಗದರ್ಶಿ ಸಾಧನೆಗಳನ್ನು ಮಾಡಿದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರು, ಈಗ ಮೋದಿ ಸರಕಾರದಿಂದ ರಾಜ್ಯ ಸಭೆಗೆ ನಾಮ ನಿರ್ದೇಶನಗೊಂಡಿರುವುದು ಸಮಾಜಕ್ಕೆ ಹೆಮ್ಮೆ ಹಾಗೂ ಸಂಭ್ರಮದ ವಿಚಾರವಾಗಿದೆ. ಧರ್ಮ ಸಮನ್ವಯತೆಗೆ ಹೆಗ್ಗಡೆ ಅವರ ಕೊಡುಗೆ ಮಹತ್ತರವಾದುದು ಎಂದು ಕೆ. ಪ್ರಕಾಶ್ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಪುಣೆ ಸಂತೋಷ್ ಶೆಟ್ಟಿ, ಸುಧೀರ್ ಜೆ ಹೆಗ್ಡೆ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.