ಬಂಟ್ಸ್ ನ್ಯೂಸ್, ಶಿವಮೊಗ್ಗ : ತೀರ್ಥಹಳ್ಳಿ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಮುಖ್ಯಸ್ಥರು ಮತ್ತು ಬಾರ್ಕೂರು ಮಠದ ಸ್ವಾಮಿಗಳಾದ ಡಾ. ಸಂತೋಷ್ ಗುರೂಜಿ ಇವರ ಧರ್ಮಪತ್ನಿ ಶಿಲ್ಪಾ ಶೆಟ್ಟಿ (45) ಹೃದಯಾಘಾತದಿಂದ ಎ.16ರ ಬೆಳಿಗ್ಗೆ ನಿಧನರಾದರು.
![](https://blogger.googleusercontent.com/img/b/R29vZ2xl/AVvXsEi1hp7AS913ezi_AnDwawyYa4SDA2J4kHZh_2CmDwp4Prxodk7-9VZuPJSlhTJXKy_bzgjWjil6tVsGXX2Q8xd-r3Vsn32ZGNbPNV6SqF20Lh6TPO4zSWk8j2KIW-WxlcD4WblB4QO-CfHt3rfahGIJXMudIp9CoeQYcNBNtbXa1QpoqmuQfgQChsa7PA/s16000/IMG_20220416_160421_copy_480x694.jpg)
![](https://blogger.googleusercontent.com/img/b/R29vZ2xl/AVvXsEjQX3akWbe-Lj5lHlolWOYzm0oz-VAzvR7ObV_V7FZcL-lIOpwLLfdYOmf116-5hnELeejqjmZU36NYx9xq3Jj4ktMI6vYEAWHcDRnUAw1O3iPU7lVcLEVOKeP3238EwHZxTmWKfDEueJmi7vsxbxhaaDidbPe0cAcTZTDEMu46Oh630CTplF_15a7Llg/s16000/IMG-20220416-WA0013_copy_640x384.jpg)
ತೀರ್ಥಹಳ್ಳಿ ಪಟ್ಟಣದ ವಿಜಯಾ ಹೋಟೆಲ್ ಮಾಲೀಕರಾಗಿದ್ದ ದಿವಂಗತ ಸದಾಶಿವ ಶೆಟ್ಟರ ಮಗಳು ತೀರ್ಥಹಳ್ಳಿ ಜಯರಾಮ್ ಶೆಟ್ಟಿ ಸಹೋದರಿ ಶಿಲ್ಪಾ ಶೆಟ್ಟಿ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಬೆಜ್ಜವಳ್ಳಿಗೆ ತರಲಾಗುತ್ತಿದ್ದು ಇಂದು ರಾತ್ರಿ ಸುಮಾರು 8 ಗಂಟೆಗೆ ತಲುಪುವ ಸಾಧ್ಯತೆಯಿದೆ. ನಾಳೆ ಎ.17ರಂದು ಬೆಳಿಗ್ಗೆ 9 ಗಂಟೆಗೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಸ್ವಗೃಹದ ಹತ್ತಿರ ಅಂತ್ಯಸಂಸ್ಕಾರವನ್ನು ಮಾಡಲು ಗುರುಹಿರಿಯರು ನಿಶ್ಚಯಿಸಿರುತ್ತಾರೆ ಎಂದು ತಿಳಿದು ಬಂದಿರುತ್ತದೆ.