ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳದ ಎರಡನೇ ದಿನದಂದು ಸಂಜೆ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಪಶ್ಚಿಮ ಘಟ್ಟಗಳು ಮತ್ತು ಜೀವ ವೈವಿಧ್ಯ ಕುರಿತು ವಿಚಾರಗೋಷ್ಠಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪಿಲಿಕುಲ ನಿಸರ್ಗಧಾಮದ ವಿಜ್ಞಾನಿ ಉದಯ ಕುಮಾರ್ ಶೆಟ್ಟಿ ಅವರು ನಾಡು ಉಳಿಯಲು ಕಾಡು ಮೂಲ ಕಾರಣ ಎಂದು ಒತ್ತಿ ಹೇಳಿದರು.
ಪಶ್ಚಿಮ ಘಟ್ಟಗಳು ಕಾಡು ಮತ್ತು ನಾಡಿನ ಜೀವ ವೈವಿಧ್ಯ ಉಳಿವಿಗೆ ಪ್ರಮುಖ ಕಾರಣ. ನದಿ, ಸಮುದ್ರ ನೀರ ಸೆಲೆಗೆ ಪಶ್ಚಿಮ ಘಟ್ಟಗಳೇ ಮೂಲ. ಪಶ್ಚಿಮ ಘಟ್ಟಗಳು ಬರಿದಾದರೆ ನಾವು ಬದುಕುವುದು ಕಷ್ಟ. ಪಶ್ಚಿಮ ಘಟ್ಟದಲ್ಲಿ ಅಳಿವಿನಂಚಿನ ಗಿಡಮರಗಳು ಇದ್ದು ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಯುವ ಪೀಳಿಗೆಯಿಂದ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪ್ರಶಾಂತ್ ರೈ, ಮೋಹನ್ ದಾಸ್, ಜ್ಯೋತಿ ಕುಲಾಲ್ ಉಪಸ್ಥಿತರಿದ್ದರು.