ಬಂಟ್ಸ್ ನ್ಯೂಸ್, ಉಡುಪಿ : ಬಂಟರ ಸಂಘ ಉಡುಪಿ ಇದರ 26ನೇ ವರ್ಷದ ವಾರ್ಷಿಕ ಅಧಿವೇಶನದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಧಕರಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಸಹಾಯಧನ ಹಾಗೂ ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮವು ಏ.3ರಂದು ನಡೆಯಲಿದೆ.
![](https://blogger.googleusercontent.com/img/b/R29vZ2xl/AVvXsEjP8Zkx_YaSR29QqUFKoUu-EhjLAoUKXVKULdUP_SPdALhQ39BZZYotfIMeLzhsqmLcevkvlQsPQ5P6u0e6smGq-qa5x1d7wziJ2dC2rG6Ni0FmmDqJXFS2BU9fXarmfTaI4SLJrrbAhNY_Vn_B-1ZlxiuBl5oeUL_kXy7iyEQp3NeTI9pmRdzr2omWQw/s16000/IMG_20220324_141250_copy_505x496.jpg)
![](https://blogger.googleusercontent.com/img/b/R29vZ2xl/AVvXsEjppwnFFxGX3hx4ZSIe8F8S2l_5u3yKUEcdcL-pOGBs6wSnPZsYmCYz7-xZVHkVtslzvtXYDu3IYtuuQl9Ij5hWg2RYleaEkSh_mc279Xa0_vwE0P719eTxKE9-XlJjrQ0JtYdjbTjkIqbSrjSEYbW3rfK4TN9k9S7bEBzjk59fhznC9h-a0uAGgA_tlw/s16000/IMG_20220324_141013_copy_480x724.jpg)
![](https://blogger.googleusercontent.com/img/b/R29vZ2xl/AVvXsEg2LkN8u6dF1_FjrVi5OyHXpV08xGcZaegGY9yujfcpjyu-VayiS45GGJqR7UHMI6p0BvIFj13b5vP8N2VnVOBw5XCGGhTvCqYt9IYJlXqMhQgEt1FEDLXQ6xP3pIPg47_s9Lh6IfeSjszP0QFf31I5nmL6PdDNS4bbZOYCS8WAK1836TDm8Mj-yqI4fA/s16000/IMG_20220324_141120_copy_480x731.jpg)
ಕಾರ್ಯಕ್ರಮವು ಏ.3ರಂದು ಭಾನುವಾರ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಬೆಳಿಗ್ಗೆ 9ರಿಂದ ಪ್ರಾರಂಭವಾಗಲಿದೆ. ಸಭಾ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಸಂಘದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿಯವರ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ಪುರುಷೋತ್ತಮ ಪಿ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿರುವರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಎಮ್. ಆರ್. ಜಿ. ಗ್ರೂಪ್ ಕಾರ್ಯಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್'ನ ಕಾರ್ಯಾಧ್ಯಕ್ಷ ಸದಾಶಿವ ಶೆಟ್ಟಿ, ಮುಂಬಯಿಯ ವಿಕೆ ಗ್ರೂಪ್ ಆಫ್ ಕಂಪನಿಸ್ ಇದರ ಕಾರ್ಯಾಧ್ಯಕ್ಷ ಕೆ.ಎಮ್. ಶೆಟ್ಟಿ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘ ಇದರ ಉಡುಪಿ ತಾಲೂಕು ಸಮಿತಿಯ ಸಂಚಾಲಕರಾದ ಜಯರಾಜ್ ಹೆಗ್ಡೆ ಆಗಮಿಸಲಿದ್ದಾರೆ.
ದುಬಾಯಿಯ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಕಾರ್ಯಧ್ಯಕ್ಷ ಆಡಳಿತ ನಿರ್ದೇಶಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಎ. ಸಿ. ಎಫ಼್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜ್ಯ ಅರಣ್ಯ ವಿಭಾಗ ಪರೀಕ್ಷೆಯಲ್ಲಿ 2 ನೇ ಸ್ಥಾನ ಗಳಿಸಿದ ಕುಮಾರಿ ಹಸ್ತ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಕುಟುಂಬ ಸಮೇತವಾಗಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಸಂಘದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷರಾದ ಪುರುಷೋತ್ತಮ್ ಪಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ಅಮಿತ್ ಕುಮಾರ್ ಶೆಟ್ಟಿ ಕೆ ಮೂಡನಿಡಂಬೂರು, ಖಜಾಂಜಿ ಮನೋಹರ ಶೆಟ್ಟಿ ತೋನ್ಸೆ, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ. ಕಾರ್ಯಕ್ರಮದ ಬಳಿಕ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.