ಸುರತ್ಕಲ್: ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯಿಂದ ಬಂಟರ ಭವನದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆ ನಡೆಯಿತು. ಹಣತೆ ದೀಪ ಬೆಳ ಕಿನ ಹಬ್ಬಕ್ಕೆ ಮಹಿಳಾ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಬೇಬಿ ಎನ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು.
![](https://blogger.googleusercontent.com/img/b/R29vZ2xl/AVvXsEid4TOPkTBH0b27xmgLLryeXl4E9sGUikz6J5yTRInzhdFWkIoOd_99ECiE9GdOnLTAOxzyNCwu1T03BZJcNawatBLm4PjN_oWtSTd_z4_wWk4Ao0JeXkXdAjaph0C_MHdogS51zCJnOy1G/s16000/IMG_20211112_093610.jpg)
![](https://blogger.googleusercontent.com/img/b/R29vZ2xl/AVvXsEg7-hDdIcyrbjGhCzk1rr3_C-7C3CKCaxOByiMot8hkfh4JEGeUlsQOO6Bk1hj7XDpRh3I471SwzKl94iQE7i6-DVKhud_97hEU3b_D7Pdua5j52CJKCG1Da2h3MVS-xi-wa3PT7oAW2eq3/s16000/IMG_20211112_093610.jpg)
ಮಹಿಳಾ ವೇದಿಕೆಯ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿ ಬೆಳಕಿನ ಹಬ್ಬವಾದ ದೀಪಾವಳಿಯ ಸಂದರ್ಭ ಪ್ರತೀವರ್ಷ ಮಹಿಳಾ ವೇದಿಕೆಯಿಂದ ಹಣತೆ ದೀಪ ಹಚ್ಚುವ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ಬೆಳಕಿನ ಹಬ್ಬ ದೀಪಾವಳಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.
ದೀಪಗಳ ಮಹತ್ವ ದೀಪಾ ವಳಿಯಂದು ಅರಿವಾಗುತ್ತದೆ. ದೀಪಗಳ ಬೆಳಕು ಅಂದರೆ ಸುಜ್ಞಾನದ ಬೆಳಕು. ಈ ಬೆಳಕಿನ ಮೂಲಕ ಅಸುರೀ ಶಕ್ತಿಗಳು ದೂರವಾಗಲಿ ಎಂದು ಮಹಿಳಾ ವೇದಿಕೆಯ ಉಪಾಧ್ಯೆಕ್ಷೆ ಭವ್ಯಾ ಎ ಶೆಟ್ಟಿ ತಿಳಿಸಿದರು.
ಕಾಲ ಉರುಳಿದಂತೆ ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬ ಮತ್ತದರ ಸಂಸ್ಕೃತಿ ಮರೆಯಾಗುತ್ತಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸನಾತನ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಆಗಬೇಕಾಗಿದೆ ಎಂದು ಜೊತೆ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ತಿಳಿಸಿದರು.
ಮಹಿಳಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸರೋಜ ಟಿ ಶೆಟ್ಟಿ ಸ್ವಾಗತಿಸಿದರು. ಮಹಿಳಾ ವೇದಿಕೆಯ ಕೋಶಾಧಿಕಾರಿ ಶೈಲಾ ಎಸ್ ಶೆಟ್ಟಿ, ಸಂಘಟನಾ ಕಾರ್ಯ ದರ್ಶಿ ಭಾರತಿ ಜಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಕೇಸರಿ ಎಸ್ ಪೂಂಜಾ ಹಾಗೂ ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು.