ಕರುಣಾಜನಕ ಸ್ಥಿತಿಯಲ್ಲಿದ್ದ ಕೊಡಿಕಲ್ ಗೀತಾ ಶೆಟ್ಟಿ ಕುಟುಂಬದ ಕಣ್ಣೀರೊರೆಸಿದ ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕರುಣಾಜನಕ ಸ್ಥಿತಿಯಲ್ಲಿದ್ದ ಕೊಡಿಕಲ್ ಗೀತಾ ಶೆಟ್ಟಿ ಕುಟುಂಬದ ಕಣ್ಣೀರೊರೆಸಿದ ಐಕಳ ಹರೀಶ್ ಶೆಟ್ಟಿ

Share This
ಮಂಗಳೂರು: ಮಂಗಳೂರು ಕೊಡಿಕಲ್ ಬ್ರಹ್ಮ ಸ್ಥಾನ ನಿವಾಸಿ ಗೀತಾ ಶೆಟ್ಟಿ ಅವರು ಕಳೆದ ನಾಲ್ಕು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಳುತ್ತಿದ್ದು , ವೈದ್ಯಕೀಯ ಚಿಕಿತ್ಸೆಗಾಗಿ ಇದ್ದ ಹಣವನ್ನೆಲ್ಲ ಖರ್ಚು ಮಾಡಿ ಇದು ಸಾಲದೆ ಕೈಸಾಲವನ್ನು ಮಾಡಿರುತ್ತಾರೆ, ಪತಿ ಸರಿಯಾದ ಆದಾಯವಿಲ್ಲದೆ ಸಮಸ್ಯೆಗೊಳಗಾಗಿದ್ದಾರೆ, ಮಗ ಮತ್ತು ಮಗಳು ಕಾಲೇಜು ಶುಲ್ಕವನ್ನು ಭರಿಸಲಾಗದೆ ಸಮಸ್ಯೆಗೊಳಗಾಗಿದ್ದು , ಇನೇನು ಅತ್ಮಹತ್ಯೆಗೆ ಮುಂದಾದಾಗ ನೆರೆಯ ಗೀತಾ ಭಟ್ ಮತ್ತು ಲೀಲಾ ಭಟ್ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿಯನ್ನು ಪರಿಶೀಲಿಸಿ ಕೂಡಲೇ ಸ್ಪಂದಿಸಿದ ಐಕಳ ಹರೀಶ್ ಶೆಟ್ಟಿ ಹಾಗೂ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಒಕ್ಕೂಟದ ಪದಾಧಿಕಾರಿಯೊಂದಿಗೆ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿತು ಕೂಡಲೇ ಸಂಘದ ವತಿಯಿಂದ ರೂಪಾಯಿ 2.65 ಲಕ್ಷ ನೀಡಿದ್ದು. ವೈದ್ಯಕೀಯ ಚಿಕಿತ್ಸೆಗಾಗಿ ಮಾಸಿಕ ಹಣವನ್ನು ನೀಡಲು ಮುಂದಾಗಿದ್ದಾರೆ.

ಈ ಬಡ ಕುಟುಂದ ಉಳಿವಿಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿಗಳ ಸದಾಶಿವ ಶೆಟ್ಟಿ ಹೆರಂಬ ಇಂಡಸ್ಟೀಟ್, ತೋನ್ಸೆ ಆನಂದ ಶೆಟ್ಟಿ ಅರ್ಗನಿಕ್ ಇಂಡಸ್ಟೀಟ್, ರತ್ನಾಕರ ಶೆಟ್ಟಿ ಮುಂಡ್ಕೂರು, ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ ಮುಂಬೈ, ಉಳ್ತೂರು ಮೊಹನ್ ದಾಸ್ ಶೆಟ್ಟಿ, ಚಂದ್ರಿಕಾ ಐಕಳ ಹರೀಶ್ ಶೆಟ್ಟಿ ಮುಂದಾಗಿದ್ದಾರೆ.

Pages