ಡಾ| ಎಂ. ಎನ್ ರಾಜೇಂದ್ರ ಕುಮಾರ್ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಬೆಂಬಲ ಸೂಚಿಸಿದ ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಡಾ| ಎಂ. ಎನ್ ರಾಜೇಂದ್ರ ಕುಮಾರ್ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಬೆಂಬಲ ಸೂಚಿಸಿದ ಐಕಳ ಹರೀಶ್ ಶೆಟ್ಟಿ

Share This
ಮಂಗಳೂರು : ವಿಧಾನ ಪರಿಷತ್ ಚುನಾವಣಾಗೆ ಸ್ಪರ್ಧಿಸುತ್ತಿರುವ ಡಾ| ಎಮ್. ಎನ್ ರಾಜೇಂದ್ರ ಕುಮಾರ್ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಬೆಂಬಲ ಸೂಚಿಸಿದ ಐಕಳ ಹರೀಶ್ ಶೆಟ್ಟಿ ಅವರು ಹೆಚ್ಚಿನ ಮತಗಳಿಂದ ವಿಜಯಿಶಾಲಿಯಾಗುವಂತೆ ಹಾರೈಸಿದರು.
ಅವರು ನ.16ರಂದು ಡಾ| ಎಮ್. ಎನ್ ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟವು 120 ಬಂಟರ ಸಂಘಗಳ ಮಾತೃಸಂಘ. ದಾನಿಗಳ ಸಹಾಯದಿಂದ ಎಲ್ಲಾ ಧರ್ಮದ, ಜಾತಿಯ ಕಷ್ಟದಲ್ಲಿರುವವರ ನೆರಳಾಗಿ ಒಕ್ಕೂಟವು ಸೇವೆ ನೀಡುತ್ತಿದೆ. ಒಕ್ಕೂಟಕ್ಕೆ ಬಂಟರನ್ನು ಬಿಟ್ಟು ಬೇರೆ ಸಮಾಜದವರು ದಾನ ನೀಡಿದ್ದರೆ ಅದು ಡಾ| ಎಮ್. ಎನ್ ರಾಜೇಂದ್ರ ಕುಮಾರ್. ಎಲ್ಲಾ ಧರ್ಮ, ಸಮಾಜವರನ್ನ ಒಂದಾಗಿ ಕಂಡು ಜನರ ಸೇವೆ ಮಾಡುವ ವ್ಯಕ್ತಿ ಎಂದು ಶ್ಲಾಘಿಸಿದರು.

ಸಮಾಜ ಸೇವೆ ಮಾಡುವ ವ್ಯಕ್ತಿಗೆ ಯಾವುದೇ ಪಕ್ಷದ ಅಗತ್ಯವಿಲ್ಲ. ರಾಜೇಂದ್ರ ಕುಮಾರ್ ಅವರನ್ನು ನಾವೆಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸೋಣ. ಒಕ್ಕೂಟದ ಎಷ್ಟು ಮತಗಳಿವೆಯೋ ಅದೆಲ್ಲವು ರಾಜೇಂದ್ರ ಕುಮಾರ್ ಅವರಿಗೆ ಸಿಗಲಿ. ಮುಂದೆ ಮಂತ್ರಿ ಪದವಿ ಕೂಡ ಅವರಿಗೆ ಲಭಿಸಿ ಹೆಚ್ಚಿನ ಸಮಾಜ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. 

Pages