‘ಶ್ರೀ’ ಕಾರದ ಹೆಸರಿರುವವರ ಚಿತ್ತ ಹೆಚ್ಚಾಗಿ ‘ಆಧ್ಯಾತ್ಮ’ದತ್ತ ಯಾಕೆ ಇರುತ್ತೆ ಗೊತ್ತಾ..? - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

‘ಶ್ರೀ’ ಕಾರದ ಹೆಸರಿರುವವರ ಚಿತ್ತ ಹೆಚ್ಚಾಗಿ ‘ಆಧ್ಯಾತ್ಮ’ದತ್ತ ಯಾಕೆ ಇರುತ್ತೆ ಗೊತ್ತಾ..?

Share This

ಉಡುಪಿ : ಇಂದಿನ ವೇಗದ ಪ್ರಪಂಚದಲ್ಲಿ ಜನ ನೆಮ್ಮದಿಗಾಗಿ ಕಡೆಗೆ ಆಧ್ಯಾತ್ಮದತ್ತ ವಾಲುವುದು ಸಹಜ, ಹಾಗೆ ಆಧ್ಯಾತ್ಮಕ್ಕೆ ಕೆಲವರು ತಮ್ಮ ಆಸಕ್ತಿಯಿಂದ ಬಂದಿದ್ದರೆ ಕೆಲವರು ತಮ್ಮ ನಾಮಬಲದಲ್ಲಿನ ತರಂಗದ ಪ್ರಭಾವದಿಂದ ಆಧ್ಯಾತ್ಮಕ್ಕೆ ಸೆಳೆಯಲ್ಪಡುತ್ತಾರೆ. ಹಾಗೆ ಆಧ್ಯಾತ್ಮಕ್ಕೆ ಸೆಳೆಯಲ್ಪಡುವರಲ್ಲಿ ‘ಶ್ರೀ’ಕಾರದಿಂದ ಹೆಸರು ಪ್ರಾರಂಭದವರೇ ಹೆಚ್ಚೆಂಬುದು ಆಶ್ಚರ್ಯಕರ ವಿಷಯವಾಗಿದೆ.

ಹಿಂದೂ ಸಂಪ್ರದಾಯದ ಪ್ರಕಾರ ಮಗು ಹುಟ್ಟಿದ ಸಮಯಕ್ಕೆ ಅನುಗುಣವಾಗಿ ರಾಶಿ, ನಕ್ಷತ್ರ, ಗೋತ್ರ ಹಾಗೂ ರಾಶಿಗೆ ಅನುಗುಣವಾಗಿ ಹೆಸರಿಡುವ ಕ್ರಮವು ಅನಾದಿ ಕಾಲದಿಂದಲೂ ಬಂದಿದೆ. ಹೀಗೆ ಹೆಸರಿಡುವ ಸಂದರ್ಭ ದೇವರ ಕೃಪೆಗಾಗಿ ‘ಶ್ರೀಕಾರ ಆರಂಭದೊಂದಿಗೆ ಹೆಸರಿಡುತ್ತಾರೆ.


‘ಶ್ರೀ’ ಪದದ ಮಹತ್ವ : ‘ಶ್ರೀ’ ಪದವು ಹಿಂದೂ ಸಂಪ್ರದಾಯದ ಪ್ರಕಾರ ಅತ್ಯಂತ ಪರಮ ಪವಿತ್ರವಾದ ಧಾರ್ಮಿಕ ಶುಭ ಸಾಂಕೇತಿಕ ಅಕ್ಷರವಾಗಿದೆ. ‘ಶ್ರೀ’ ಅಕ್ಷರವು ದೇವಿ ಲಕ್ಷ್ಮೀಯ ಅವತಾರವನ್ನು ಸೂಚಿಸುತ್ತದೆ. ಪವಿತ್ರ ಶ್ರೀಯಂತ್ರದಲ್ಲೂ ಶ್ರೀಕಾರವಿದೆ. ಸಂಸ್ಕೃತ, ಹಿಂದಿ, ಮರಾಠಿ, ಕನ್ನಡ, ತಮಿಳು ಹಾಗೂ ಬೇರೆ ಭಾಷೆಗಳಲ್ಲಿ ತನ್ನದೇ ಶೈಲಿಯ ಶ್ರೀಕಾರವನ್ನು ಕಾಣಬಹುದು. ಪ್ರತಿ ದೇವರು, ಗುರುಗಳ ಹೆಸರಿನ ಮುಂಚೆ ಶ್ರೀಕಾರವಿದ್ದು ಪ್ರಾಮುಖ್ಯತೆ ಪಡೆದಿದೆ. ಅಲ್ಲದೇ ಮತ್ತೊಬ್ಬರನ್ನು ಗೌರವ ಸೂಚಕವಾಗಿ ಸೂಚಿಸುವಲ್ಲೂ ಶ್ರೀಕಾರ ಕಾಣಬಹುದು.


ಇಷ್ಟೆಲ್ಲಾ ದೈವಿಕ ಹಿನ್ನೆಲೆಯಿರುವ ‘ಶ್ರೀ’ ಅಕ್ಷರದ ಪ್ರಭಾವವು ಶ್ರೀಕಾರದಿಂದ ಹೆಸರು ಆರಂಭವಾಗುವ ಕೆಲವರಲ್ಲಿ ಕಂಡು ಬರುತ್ತದೆ. ಇವರು ಮುಖ್ಯವಾಗಿ ಭೌತಿಕ ಆಸೆಗಳನ್ನು ತೊರೆದು ನಿರಂತರ ದೇವರ ಸ್ಮರಣ, ಜಪತಪಗಳಲ್ಲಿ ತಲ್ಲಿಣರಾಗಿರುತ್ತಾರೆ. ಸುತ್ತಲಿನ ಜನರೇ ಆಶ್ಚರ್ಯ ಪಡುವಂತೆ ಆಧ್ಯಾತ್ಮಗಳಲ್ಲಿ ಮುಳುಗಿರುತ್ತಾರೆ. (ಬರಹ : ಪಿ. ಆರ್ ಶೆಟ್ಟಿ ಉಡುಪಿ, ಆಧ್ಯಾತ್ಮ ಚಿಂತಕರು, ಸಂಖ್ಯಾ ಜ್ಯೋತಿಷ್ಯರು)

Pages