ಮಂಗಳೂರು : ಕಟೀಲು ಮೇಳದ ಹಿರಿಯ ಭಾಗವತ ಬೊಟ್ಟುಕೆರೆ ಪುರುಷೋತ್ತಮ ಪೂಂಜ (68) ಅವರು ಶನಿವಾರ ನಿಧನರಾದರು.
![](https://blogger.googleusercontent.com/img/b/R29vZ2xl/AVvXsEh3uz1aG5FlY4GTETpAxU64LDXPPuNZiCkkEuOKViUwu7c_YpvW3lkYwYMLXrruRmB_HslN5IwxsNDyPOoNE0nuTcELuVFsYDsZeW2eXlw6uwGdWL82E1lGXUVL0DUC5nl9Fk_JdvM8Rn-r/s16000/poonja.jpg)
ಖ್ಯಾತ ಯಕ್ಷಗಾನ
ಪ್ರಸಂಗ ಕೃರ್ತರಾಗಿದ್ದ ಪೂಂಜರವರು ‘ಅಭಿನವ ವಾಲ್ಮೀಕಿ’ ಬಿರುದಿಗೆ ಪಾತ್ರರಾಗಿದ್ದರು. 35ಕ್ಕೂ ಅಧಿಕ
ಪ್ರಸಂಗಗಳನ್ನು ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ಬಿ.ಎಸ್ಸಿ ಪದವೀಧರರಾಗಿದ್ದ
ಪೂಂಜರವರು ಯಕ್ಷಗಾನ ಕ್ಷೇತ್ರದಲ್ಲಿ ಭಾಗವತಿಕೆ ಮಾತ್ರವಲ್ಲದೆ ಉತ್ತಮ ಚಂಡೆ, ಮದ್ದಳೆವಾದಕರಾಗಿಯೂ
ಗಮನ ಸೆಳೆದಿದ್ದರು.