ಮಂಗಳೂರು: ಸಿಎಂ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ದಕ ಜಿಲ್ಲೆಯ ಯುವ ನಾಯಕರಿಗೆ ಅವಕಾಶ ಸಿಗಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.
![](https://blogger.googleusercontent.com/img/b/R29vZ2xl/AVvXsEgsCFnhwp-8s8m3FXRsW0UaJYQLWrldAf_Vx6-jFDN2QtZi1ae6TOxJHStfOUSkeXFq8UGjE_q2CZB4f1f3AiVM4b3_EOXC7jzZv59OughXAgXzh4OcEHghWZsLI4sCVEyMboYe_4H0Co1l/s16000/new+karnataka+cabinet+list.jpg)
![](https://blogger.googleusercontent.com/img/b/R29vZ2xl/AVvXsEgsCFnhwp-8s8m3FXRsW0UaJYQLWrldAf_Vx6-jFDN2QtZi1ae6TOxJHStfOUSkeXFq8UGjE_q2CZB4f1f3AiVM4b3_EOXC7jzZv59OughXAgXzh4OcEHghWZsLI4sCVEyMboYe_4H0Co1l/s16000/new+karnataka+cabinet+list.jpg)
ಮುಖ್ಯವಾಗಿ ಯಡಿಯೂರಪ್ಪರ ಆಪ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹಾಗೂ ಮಂಗಳೂರು ದಕ್ಷಿಣ ಶಾಸಕ ವೇದವಾಸ ಕಾಮತ್ ಅವರ ಹೆಸರು ಮುಂಚೂಣಿಯಲ್ಲಿರುವ ಸಾಧ್ಯತೆಯಿದೆ.
ಬೆಳ್ತಂಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ, ನೆರೆ ಹಾನಿ ಸಂದರ್ಭ ಶಾಸಕ ಪೂಂಜಾ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ಮನವೊಲಿಸಿ ಹೆಚ್ಚು ಅನುದಾನ ತಂದವರಲ್ಲಿ ಮೊದಲಿಗರು.
ಅಂತೆಯೇ ಯಾವುದೇ ಸಂದರ್ಭದಲ್ಲೂ ಸೇವೆಗೆ ಸದಾ ಸಿದ್ಧ ಎಂಬಂತೆ ಕ್ಷೇತ್ರ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿರುವ ಶಾಸಕ ಡಾ. ವೈ ಭರತ್ ಶೆಟ್ಟಿ ಹಾಗೂ ವೇದವಾಸ ಕಾಮತ್ ಅವರು ಕೂಡ ಯುವ ರಾಜಕಾರಣಿಗಳಾಗಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದರೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಮೂವರಲ್ಲಿ ಓರ್ವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತರೆ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೂ ಉತ್ತಮ ಎಂಬ ಮಾತು ಕೇಳಿ ಬರುತ್ತಿದ್ದು, ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡ ಬೇಕಾಗಿದೆ.