‘ಉಗ್ರ’ ಸಂಘಟನೆ ಜತೆ ‘ಬಂಟ’ ಹೆಸರು ಉಲ್ಲೇಖಿಸಿ ಸುದ್ದಿ ಪ್ರಕಟಿಸಿ ಬಂಟ ಸಮಾಜಕ್ಕೆ ಅವಮಾನ : ವಕೀಲೆಯಿಂದ ದೂರು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

‘ಉಗ್ರ’ ಸಂಘಟನೆ ಜತೆ ‘ಬಂಟ’ ಹೆಸರು ಉಲ್ಲೇಖಿಸಿ ಸುದ್ದಿ ಪ್ರಕಟಿಸಿ ಬಂಟ ಸಮಾಜಕ್ಕೆ ಅವಮಾನ : ವಕೀಲೆಯಿಂದ ದೂರು

Share This

ಬಂಟ್ಸ್ ನ್ಯೂಸ್, ಮುಂಬೈ : ಉಳ್ಳಾಲದ ಎನ್ಐಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ದಿನಪತ್ರಿಕೆಯೊಂದು ಶೀಷಿಕೆಯಲ್ಲಿ ಉಗ್ರ ಸಂಘಟನೆ ಜತೆ ಬಂಟ ಸಮಾಜದ ‘ಬಂಟ’ ಹೆಸರು ಉಲ್ಲೇಖಿಸಿ ಅವಮಾನ ಮಾಡಿರುವುದನ್ನು ಖಂಡಿಸಿ ಮುಂಬೈ ಮೂಲದ ವಕೀಲೆ ನಿರಂಜಿನಿ ಶೆಟ್ಟಿ ದೂರು ನೀಡಿದ್ದಾರೆ.


ನಿನ್ನೆಯಷ್ಟೇ ಸ್ಥಳೀಯ ದಿನಪತ್ರಿಕೆಯಲ್ಲಿ ಮುಖಪುಟದ ಸುದ್ದಿಯ ಶೀಷಿಕೆಯಲ್ಲಿ ಈಗಾಗಲೇ ಹಿಂದೂ ಧರ್ಮದಿಂದ ಮತಾಂತರಗೊಂಡು ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಅನ್ಯ ಧರ್ಮದ ಯುವತಿಯ ಬಗ್ಗೆ ಹೇಳುವಲ್ಲಿ ಅನಾವ್ಯಶಕವಾಗಿ ಬಂಟ ಸಮಾಜದ ‘ಬಂಟ’ ಹೆಸರನ್ನು ಉಲ್ಲೇಖಿಸಿ ಪ್ರಕಟಿಸಲಾಗಿತ್ತು. ತುಳುನಾಡಿನ ಪ್ರತಿಷ್ಠಿತ ಬಂಟ ಸಮಾಜ ಬಗೆಗಿನ ಈ ರೀತಿಯ ಅವಮಾನಕಾರಿ ಸುದ್ದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.


ವಕೀಲೆ ನಿರಂಜನಿ ಶೆಟ್ಟಿ ಅವರು ದಿನಪತ್ರಿಕೆ ಪ್ರಸಾರವಾಗುವ ಪ್ರಮುಖ ಭಾಗಗಳಾದ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಡಿಕೇರಿ ಜಿಲ್ಲೆಗಳ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದಾರೆ. ದೂರಿನಲ್ಲಿ ಪತ್ರಿಕೆಯು ಈ ರೀತಿ ಸುದ್ದಿ ಪ್ರಸಾರದ ಮೂಲಕ ಸಮಾಜದ ಶಾಂತಿ ಹಾಗೂ ಸೌಹರ್ದತೆಗೆ ಭಂಗವುಂಟು ಮಾಡಿದ್ದು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಅಲ್ಲದೆ ಪತ್ರಿಕೆಯು ಬಂಟ ಸಮಾಜದ ಬಳಿ ಕ್ಷಮೆ ಕೋರಿ ಮುಖಪುಟದಲ್ಲಿ ಸುದ್ದಿ ಪ್ರಕಟಿಸುವಂತೆ ಆಗ್ರಹಿಸಿದ್ದಾರೆ.

Pages