ಬಂಟ್ಸ್ ನ್ಯೂಸ್, ಗುರುಪುರ : ಗುರುಪು ಕಾರಮೊಗರುಗುತ್ತಿನ ಕಿಟ್ಟಣ್ಣ ರೈ ಅವರು ಹೃದಯಾಘಾತದಿಂದ ಮಂಗಳವಾರ (ಆ.10) ನಿಧನರಾದರು.
![](https://blogger.googleusercontent.com/img/b/R29vZ2xl/AVvXsEjrtqx32joYVJkmb81-V-JjynoJnbxKwclPqitrrck5s5AIVZA1cELIl00Nv1IHLX2ZpDiH1CmwPB9jhRd8oOoQa-q78OtOfE-U1Cu2LzIiXAtU1n0Gd_k2scYZo-YSSkg2-Sb2BAfRtUaz/s16000/karmogaru+kittanna+rai+nidana.jpg)
ಉತ್ತಮ ಕಬ್ಬಡಿ ಆಟಗಾರರಾಗಿದ್ದ
ಕಿಟ್ಟಣ್ಣ ರೈ ಅವರು ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಸಾಮಾಜಿಕವಾಗಿ
ಸ್ನೇಹ ಜೀವಿಯಾಗಿದ್ದ ರೈ ಅವರು ಗುರುಪುರ ಸುತ್ತಮುತ್ತಲಿನ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯ ನಾಯಕರಾಗಿ
ಜನಮನ್ನಣೆ ಗಳಿಸಿದ್ದರು.