ಬಂಟ್ಸ್ ನ್ಯೂಸ್, ಬಂಟ್ವಾಳ : ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದೇಹದ ಬಲ ಕಳೆದುಕೊಂಡು ನಡೆಯಲಾರದ ಸ್ಥಿತಿಯಲ್ಲಿರುವ ಬಂಟ್ವಾಳ ಅಜಿತ್ ಕುಮಾರ್ ಶೆಟ್ಟಿ ಅವರ ಕಷ್ಟ ಮನಗೊಂಡು ಅವರ ಪ್ರತಿ ತಿಂಗಳ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಮಾಡಲಿದೆ.
![](https://blogger.googleusercontent.com/img/b/R29vZ2xl/AVvXsEi5lxf8d1Tkj7shHA7mUvznGnkhKH9iMHnkYRZZRjSzI5zkVQ2FYgWxXGKDUMjjxH4xW45-quftSRA29oPouTl1Ayqj6bjOkc3Gt6M2CUUIA2JmoZyUumzoo2RJDmt_bH3FI9c7200-UQBT/s16000/aikala+harish+shetty1.jpg)
![](https://blogger.googleusercontent.com/img/b/R29vZ2xl/AVvXsEi5lxf8d1Tkj7shHA7mUvznGnkhKH9iMHnkYRZZRjSzI5zkVQ2FYgWxXGKDUMjjxH4xW45-quftSRA29oPouTl1Ayqj6bjOkc3Gt6M2CUUIA2JmoZyUumzoo2RJDmt_bH3FI9c7200-UQBT/s16000/aikala+harish+shetty1.jpg)
ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು, ಬಂಟ್ವಾಳದ ಅಜಿತ್ ಕುಮಾರ್ ಶೆಟ್ಟಿಯವರು ಮನೆಯ ಮಹಡಿಯಿಂದ ಬಿದ್ದು ಬೆನ್ನುಮೂಳೆ, ಸೊಂಟದ ಕೀಲುಗಳು ಹಾಗೂ ಕುತ್ತಿಗೆಯಿಂದ ಕೆಳಗೆ ಸಂಪೂರ್ಣ ಬಲಹೀನರಾಗಿ ಮಲಗಿದಲ್ಲಿಯೇ ಇರುವ ಅವರ ಕಷ್ಟವನ್ನು ಅರಿತು ಅವರನ್ನು ದತ್ತು ಯೋಜನೆಯಡಿ ದತ್ತು ಸ್ವೀಕಾರ ಮಾಡಿದ್ದಾರೆ. ಅಲ್ಲದೆ ಒಕ್ಕೂಟದ ವತಿಯಿಂದ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರತಿ ತಿಂಗಳು ಧನಸಹಾಯ ಮಂಜೂರು ಮಾಡಿರುತ್ತಾರೆ.