ಬಂಟ್ಸ್ ನ್ಯೂಸ್, ಸುರತ್ಕಲ್: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸದಸ್ಯರಾಗಿ ಗೆದ್ದವರು ಜನಪ್ರತಿನಿಧಿಗಳೊಂದಿಗೆ ಕೊಂಡಿಯಾಗಿ ಕೆಲಸ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಸ್ಪಂದಿಸುವಂತಾಗಲಿ ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್.ಪೂಂಜ ತಿಳಿಸಿದರು. ಸುರತ್ಕಲ್ ಬಂಟರ ಭವನದಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯಲ್ಲಿ ಗೆದ್ದು ಬಂದ ಸಮಾಜದ ಪಂಚಾಯತ್ ಸದಸ್ಯರನ್ನು ಗೌರವಿಸಲಾಯಿತು.
![](https://blogger.googleusercontent.com/img/b/R29vZ2xl/AVvXsEgvK2Q42Bwk1kz1GwzCrALu76dsvoO8pSwDZtp7aWf-1cZ0FUMGpIuA7IpQkJfXOO1W9m96EY5rHzJlhgE8UIczou8TNPGt0mlYx9CkI5qxqUh6jtb0WP4Y0uJVzbstRl7zhZLqC7kM6xLr/s16000/bunts+surathkal.jpg)
![](https://blogger.googleusercontent.com/img/b/R29vZ2xl/AVvXsEgvK2Q42Bwk1kz1GwzCrALu76dsvoO8pSwDZtp7aWf-1cZ0FUMGpIuA7IpQkJfXOO1W9m96EY5rHzJlhgE8UIczou8TNPGt0mlYx9CkI5qxqUh6jtb0WP4Y0uJVzbstRl7zhZLqC7kM6xLr/s16000/bunts+surathkal.jpg)
ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ ಖಂಡಿಗೆ, ಬಾಲಕೃಷ್ಣ ಶೆಟ್ಟಿ ಚೇಳಾರು, ಚರಣ್ ಶೆಟ್ಟಿ ಮದ್ಯ, ಪ್ರತಿಮಾ ಶೆಟ್ಟಿ ಮದ್ಯ, ಪ್ರೇಮಾ ಶೆಟ್ಟಿ, ಗೀತಾ ಶೆಟ್ಟಿ ದೇಲಂತಬೆಟ್ಟು, ನವೀನ್ ಶೆಟ್ಟಿ ಕುತ್ತೆತ್ತೂರು, ಜ್ಯೋತಿ ಶೆಟ್ಟಿ ಕುತ್ತೆತ್ತೂರು, ಸೌಮ್ಯ ಶೆಟ್ಟಿ ಬಾಳ ಮೊದಲಾದವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ತಡ್ರೆ, ಪ್ರಧಾನ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮಹಿಳಾ ವಿಭಾಗದ ಅಧ್ಯಕೆ ಬೇಬಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.