ಬಂಟ್ಸ್ ನ್ಯೂಸ್, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಡಿ.1ರಂದು ಬಂಟ್ಸ್ ಹಾಸ್ಟೇಲಿನ ಶ್ರೀಮತಿ ಗೀತಾ ಎಸ್.ಎಂ ಶೆಟ್ಟಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ, ವಸತಿ ಹಾಗೂ ಬಡ ಹೆಣ್ಣಮಕ್ಕಳ ಮದುವೆಗೆ ಆರ್ಥಿಕ ನೆರವು ವಿತರಣೆಯ ಕಾರ್ಯಕ್ರಮವು ನಡೆಯಿತು.
![Bunts-Social-Welfare-Program Bunts-Social-Welfare-Program](https://blogger.googleusercontent.com/img/b/R29vZ2xl/AVvXsEgD7YkvqOWtbDG85tRzU3HQetn-nSI4u-LQel6Tkn0ZDy3nzB2jrdRLD2OkUkIoF9Dm9rZVZVuEI3lvUFKk-KARHS0imh8yQLfJR8BYf9StoUu0Cj-8wEU2u3rGxzmQrfo7YqS2hpjt8XwF/s16000/federations7.jpg)
![](https://blogger.googleusercontent.com/img/b/R29vZ2xl/AVvXsEhVg6WKD7PM8l-Wfh_eOaR6n4L5efX9TqoBERGyrFkv-FOGgUWT1zj-Er0imH8EejvnuSwCpz85G-DjQCcTLgEr728Ose2QWP17JQItgLQ1IaICZMAc2QE5zhPI0Gb-N8P6n9_XJ9hP6To3/s16000/federations6.jpg)
![Bunts-Social-Welfare-Program Bunts-Social-Welfare-Program](https://blogger.googleusercontent.com/img/b/R29vZ2xl/AVvXsEhkFpZVTHmwe_GTKWmGTLUK72MtOSz6A_tjNxIxyO-lFCJWpId8EaRYYZTTB9SKXcEq0-_krDUb_3ZEE-hb84vLJoksl202uS_vo3xtG4D4QvJnpU75xThcoKp4NpZGYkVda3RVN6NxutSB/s16000/federations5.jpg)
![Bunts-Social-Welfare-Program mmumbai-bunts](https://blogger.googleusercontent.com/img/b/R29vZ2xl/AVvXsEj-UNP_zVWtzRofoftSz5mWzKK8Dsr4KLz94wuNPYBe56kn4stxox4JOENLlOEdvjncuFPeKJaWpfLg1SlXfYF9KwuWhFcX4JA5s1MCC6qVtSTO0pCD0a1NpPGq8fqgwRl420eOme6-tWfb/s16000/federations2.jpg)
![](https://blogger.googleusercontent.com/img/b/R29vZ2xl/AVvXsEjuObcn67cw112sZYPlePnQWEBXWUe9H8qRoyI0izgg64zBXKgi5w0NFXjzjefCpGzMRAQ5ODxZ_13oge8-y6-9r4XJoA9bJogxkEP3lwG7djcgBERDz79U9qgVK6m2TDywGTa4Qh1tJt6P/s16000/federations3.jpg)
![](https://blogger.googleusercontent.com/img/b/R29vZ2xl/AVvXsEi47OZRDBAXHe-8aesqFtfvZwt_XQ02aXeh1C1sNji5NTw-_X793gJXKJlEqDCrCTDxkQ3H7nP0C9W2o9rD11OWKsUYbqx1_0uC605Cvu1TuhDdhOWbIuvGpqRmetxxzSX_-AxgdGCB2uTo/s16000/federations4.jpg)
![costal-bunts mangalore-karavali](https://blogger.googleusercontent.com/img/b/R29vZ2xl/AVvXsEh33kLtFeyLgtg1vDhLXS1cjzOjjhqVgAZ2etHFY1JlUGIhhjIgQqwHJ1zk4gUcAfi10Tu3yN5twbjechlo4XE5cE-GaycPnWzb7aD6Kilj2ks0xxLaz4MJZSTylNffbm18E9fxwV1IdXqn/s16000/federations1.jpg)
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಅವರು ಕಾರ್ಯಕ್ರಮದ
ದೀಪ ಬೆಳಗಿಸಿ ಮಾತನಾಢಿ, 111 ವರ್ಷ ಇತಿಹಾಸದ ಬಂಟರ ಸಂಘವನ್ನು ಕಟ್ಟಿದ ಅಂದಿನ ಹಿರಿಯರ ದಾರಿಯಲ್ಲಿ
ಐಕಳ ಅವರು ನಡೆಯುತ್ತಿರುವುದು ಮೆಚ್ಚುಗೆಯ ವಿಷಯ. ಒಕ್ಕೂಟವು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ
ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುತ್ತಿದ್ದು ವಿದ್ಯಾರ್ಥಿಗಳು ಈ ಸಹಾಯವನ್ನು
ಸದುಪಯೋಗಪಡಿಸಿ ಉತ್ತಮ ನಾಗರಿಕರಾಗಿ ಸಮಾಜವನ್ನು ಮರೆಯದೆ ಬಾಳಿರಿ ಎಂದರು.
ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಸೇರಿಗಾರ್ ಕಟೀಲು ದಂಪತಿಯನ್ನು, ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗೋಪಾಲಕೃಷ್ಣ ಆರಕ್ಷಕ, ಅಕ್ಷತಾ ವಿ. ಶೆಟ್ಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ
ವಿಜೇತ ಸುರತ್ಕಲ್ ಬಂಟರ ಸಂಘದ ಪರವಾಗಿ ಅದರ ಅಧ್ಯಕ್ಷರಾದ ಸುಧಾಕರ ಪೂಂಜ ಹಾಗೂ ಮೈಮೂನ ಫೌಂಡೇಶನಿನ
ಸಮಾಜಸೇವಕ ಅಪತ್ಬಾಂದವ ಅಸೀಫ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೆನ್ಲಾಕ್ ಆಸ್ಪತ್ರೆಯಲ್ಲಿ
ಬಡರೋಗಿಗಳ ಪ್ರತಿದಿನ ಊಟ ವಿತರಣೆ ಮಾಡುವ ಎಂ. ಫ್ರೆಂಡ್ಸ್ ಕಾರುಣ್ಯ ತಂಡಕ್ಕೆ 1 ತಿಂಗಳ ಆರ್ಥಿಕ ಸಹಾಯ
ನೀಡಲಾಯಿತು.
ಸಮಾರಂಭದ
ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್
ಶೆಟ್ಟಿ ವಹಿಸಿದ್ದರು. ಅವರು ಮಾತನಾಡಿ ಬಂಟರು ಎಲ್ಲಾ ಸಮಾಜವನ್ನು
ಪ್ರೀತಿಸಿದವರು. ಮಾನವ ಜಾತಿಯಲ್ಲಿ ಎಲ್ಲರೂ ಒಂದೇ ಎಂಬ ದೃಷ್ಠಿಯಲ್ಲಿ ಎಲ್ಲಾ ಸಮಾಜದ ಆಶಕ್ತರಿಗೂ ಸಹಾಯ
ಮಾಡಿದ್ದೇವೆ. ಮಾತವಲ್ಲದೇ ಬೇರೆ ಸಮಾಜದಲ್ಲಿ ಸಾಮಾಜಿಕವಾಗಿ ಸಹಾಯ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿ
ಗೌರವಿಸಿದ್ದೇವೆ. ಇಂದು ಕಟೀಲು ಕ್ಷೇತ್ರದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಲಿಂಗಪ್ಪ ಶೇರಿಗಾರ
ಹಾಗೂ ಸಮಾಜಸೇವಕ ಆಸಿಫ್ ಅಪತ್ಬಾಂದವ ಅವರನ್ನು ಗುರುತಿಸಿ ಸನ್ಮಾನಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ, ವಸತಿ ಹಾಗೂ ಬಡ ಹೆಣ್ಣಮಕ್ಕಳ ಮದುವೆಗೆ ಆರ್ಥಿಕ ನೆರವು ವಿತರಣೆ ನಡೆಯಿತು.
ಸಮಾರಂಭದಲ್ಲಿ ಎಸ್ ಸಿಡಿಸಿಸಿ ಅಧ್ಯಕ್ಷ ಡಾ.ಎಮ್.ಎನ್ ರಾಜೇಂದ್ರ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜೇಶ್ ನಾೈಕ್, ಉಮಾನಾಥ್
ಎ ಕೋಟ್ಯಾನ್, ಬಂಟವಾಳ ಬಂಟದ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ರೈ, ಯು.ಟಿ ಖಾದರ್, ಮಾಜೀ
ಸಚಿವರಾದ ಬಿ ರಮಾನಾಥ ರೈ, ಕೆ ಅಭಯಚಂದ್ರ ಜೈನ್, ಮಿಥುನ್
ರೈ, ಒಕ್ಕೂಟದ ಉಪಾಧ್ಯಕ್ಷ
ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು
ಮೋಹನ್ ದಾಸ್ ಶೆಟ್ಟಿ, ಜತೆ
ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್,
ಕೊಲ್ಲಾಡಿ ಬಾಲಕೃಷ್ಣ ರೈ ಮತ್ತಿತರ
ಪ್ರಮುಖರು ಇದ್ದರು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಪ್ರಾರ್ಥಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ
ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಒಕ್ಕೂಟದ ಗೌರವ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ
ಶೆಟ್ಟಿ ವಂದಿಸಿದರು. ವಿಠಲ ನಾಯಕ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ
ನಡೆಸಿಕೊಟ್ಟರು.