ಬಂಟ್ಸ್ ನ್ಯೂಸ್, ಮಂಜೇಶ್ವರ : ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಸದಸ್ಯರಾಗಿ ಕಾಸರಗೋಡು ಜಿಲ್ಲೆಯಿಂದ ನ್ಯಾ. ಎಂ. ದಾಮೋದರ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
![](https://blogger.googleusercontent.com/img/b/R29vZ2xl/AVvXsEhkmg9o_9uBJsyk3pbX3Y9JLK8Kuecaihkv4aiA8MPEv6fPJjX92W2to6PlmY1VKSNUtAU4roK_6BeALWhidyCmNBgOfGHZD-skZmEQXmsWHa8tYw2lI6U3mjQuTFFAYVzxfN6SSwXnI32y/w443-h500/damodhara+shetty.jpg)
![](https://blogger.googleusercontent.com/img/b/R29vZ2xl/AVvXsEhkmg9o_9uBJsyk3pbX3Y9JLK8Kuecaihkv4aiA8MPEv6fPJjX92W2to6PlmY1VKSNUtAU4roK_6BeALWhidyCmNBgOfGHZD-skZmEQXmsWHa8tYw2lI6U3mjQuTFFAYVzxfN6SSwXnI32y/w443-h500/damodhara+shetty.jpg)
ಕಾಸರಗೋಡು ಜಿಲ್ಲಾ ಬಂಟರ ಸಂಘದ ಗೌರವ ಕಾರ್ಯದರ್ಶಿಯಾಗಿ, ಬಂಟ್ಸ್ ಮಜಿಬೈಲಿನ ಸಲಹೆಗಾರರಾಗಿ ಗೌರವ ಮಾರ್ಗದರ್ಶಕರಾಗಿ, ಮಂಜೇಶ್ವರ ಜಯ-ವಿಜಯ ಜೋಡುಕರೆ ಕಂಬಳದ ಮಾಜಿ ಅಧ್ಯಕ್ಷರಾಗಿ, ಬಲ್ಲಂಗುಡೇಲ್ ಶ್ರೀ ಪಾಡಂಗರೇ ಭಗವತಿ ಕ್ಷೇತ್ರದ ಕಾಳಿಯಾಟ ಸಂದರ್ಭದಲ್ಲಿ ಸತತ ನಲ್ವತೈದು ವರ್ಷದಿಂದ ಸ್ವಂತ ವೆಚ್ಚದಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜನೆ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ನ್ಯಾ. ಎಂ ದಾಮೋದರ ಶೆಟ್ಟಿಯವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಕರ್ನಾಟಕದ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಸಚಿವರಾದ ಸಿಟಿ ರವಿಯವರು ಆಯ್ಕೆ ಮಾಡಿದ್ದರು. (ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮುಲೆ)