BUNTS NEWS, USA: ಅಮೇರಿಕಾದ ನ್ಯೂಜರ್ಸಿಯ ಶ್ರೀ ಕೃಷ್ಣ ವೃಂದಾವನದಲ್ಲಿ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ 34ನೇ
ಘಟಕವನ್ನು ಆದಿ ಚುಂಚನಗಿರಿ ಮಠದ
ಶ್ರೀ ನಿರ್ಮಾಲಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
2018ರ ಆಗಸ್ಟ್ 15ರಂದು ಅಮೇರಿಕಾ ಘಟಕ ಸ್ಥಾಪನೆಗೆ
ಅಮೇರಿಕಾ ಸರಕಾರವು ಮಾನ್ಯತೆ
ನೀಡಿದ್ದು ಅದರ
ಮೂಲ ಪ್ರಯತ್ನಗಾರರು ವಿದ್ವಾನ್ ಯೊಗೇಂದ್ರ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ ನಡೆದು ಬಂದ ದಾರಿಯನ್ನು ಸ್ಥಾಪಕಾಧ್ಯಕ್ಷ
ಪಟ್ಲ ಸತೀಶ್
ಶೆಟ್ಟಿ ಸಭೆಯಲ್ಲಿ ವಿವರಿಸಿದರು.
ನ್ಯೂಜರ್ಸಿಯ
ಶ್ರೀಕೃಷ್ಣ ವೃಂದಾವನಕ್ಕೆ
ಅಮೇರಿಕಾ ಘಟಕದ ಉದ್ಘಾಟನಾ ಸಮಾರಂಭಕ್ಕೆ
ಆಗಮಿಸಿದ ಆದಿ ಚುಂಚನಗಿರಿ ಮಠದ
ನಿರ್ಮಾಲಾನಂದ ಸ್ವಾಮೀಜಿಯವರು ಭಕ್ತಿಯ ದ್ಯೋತಕವಾಗಿ ಕೃಷ್ಣ ಮಠದ ಬಳಿ
ಬಾಲವೃಕ್ಷವನ್ನು ನೆಟ್ಟು ಜಲಪ್ರೋಕ್ಷನ ಮಾಡಿದರು.
ಸಮಾರಂಭದಲ್ಲಿ
ಶ್ರೀ ಪ್ರೇಮಾನಂದ ಸ್ವಾಮಿ, ಪ್ರಕಾಶ್ ಚಾರ,
ವಾಸು ಐತಾಳ, ಶಾನಾಡಿ ಅಜಿತ್ ಕುಮಾರ್
ಹೆಗ್ಡೆ ಸವಣೂರು ಸೀತಾರಾಮ
ರೈ, ಕೇಂದ್ರಿಯ ಘಟಕದ ಸಂಘಟನಾ ಕಾರ್ಯದರ್ಶಿ
ನವನೀತ ಶೆಟ್ಟಿ ಕದ್ರಿ, ಕೋಶಾಧಿಕಾರಿ ಸಿಎ
ಸುದೇಶ್ ರೈ, ಶ್ರೀಪತಿ ಭಟ್,
ಭಾಸ್ಕರ ರೈ ಕುಕ್ಕುವಳ್ಳಿ, ಸುಧಾಕರ
ಪೂಂಜಾ ಹೊಸಬೆಟ್ಟು, ರವಿಚಂದ್ರ ಶೆಟ್ಟಿ ಅಶೋಕನಗರ ಮೊದಲಾದವರು
ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ
ತಿರುಪತಿ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮ ಜರಗಿತು.