BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ
ಒಕ್ಕೂಟವು 14 ಮದುವೆಗೆ, 4 ವೈದ್ಯಕೀಯ ಚಿಕಿತ್ಸೆಗೆ, 8 ವಸತಿ ಯೋಜನೆಗೆ ಹಾಗೂ
2 ಇತರೆ ಒಟ್ಟು 8.50 ಲಕ್ಷ ರೂ. ಆರ್ಥಿಕ ಸಹಾಯಧನವನ್ನು ಮೇ.14 ರಂದು ಒಕ್ಕೂಟದ ಆಡಳಿತ ಕಚೇರಿಯಲ್ಲಿ ಮಂಜೂರು ಮಾಡಿದ ಚೆಕ್ಗಳನ್ನು ಫಲಾನುಭವಿಗಳಿಗೆ ವಿತರಿಸಿತು.
ಒಕ್ಕೂಟದ ಅಧ್ಯಕ್ಷರಾದ
ಐಕಳ ಹರೀಶ್
ಶೆಟ್ಟಿ ಹಾಗೂ ಪದಾಧಿಕಾರಿಗಳು ಒಟ್ಟು
28 ಮಂದಿ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಿದರು.
ಈ ಸಂದರ್ಭ ಸಭೆಯನ್ನುದ್ದೇಶಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು
ಮಾತನಾಡಿ, ಸಹಾಯ ಮಾಡುವುದು ದೇವರ ಕೆಲಸವಾಗಿದ್ದು
ನಮಗೆ ಈ ಕೆಲಸದಲ್ಲಿ ತುಂಬಾ
ಸಂತೋಷವಿದೆ. ನಮಗೆ ಎಲ್ಲಿಯವರೆಗೆ ಸಾಧ್ಯವೊ
ಅಲ್ಲಿಯವರೆಗೆ ಇಂತಹ ಕೆಲಸ ಮಾಡಿ
ಸಮಾಜದ ಋಣ ತೀರಿಸುತ್ತೇವೆ ಎಂದು
ಹೇಳಿದರು.
ಈ ಸಂದರ್ಭ ಒಕ್ಕೂಟದ
ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ
ಉಳ್ತೂರು ಮೋಹನ್ದಾಸ್ ಶೆಟ್ಟಿ,
ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್, ಒಕ್ಕೂಟದ ಜೊತೆ ಕಾರ್ಯದರ್ಶಿ ಸತೀಶ್
ಅಡಪ್ಪ ಸಂಕಬೈಲ್ ಸ್ವಾಗತಿಸಿದರು.
ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿಯವರು ಈ
ಮಹತ್ವಾಕಾಂಕ್ಷೆ ಯೋಜನೆಯ ಬಗ್ಗೆ ವಿವರಣೆ
ನೀಡಿದರು.
ಈ ಸಂದರ್ಭ ಕೋಶಾಧಿಕಾರಿ ಉಳ್ತೂರು ಮೋಹನ್ದಾಸ್
ಶೆಟ್ಟಿ, ಒಕ್ಕೂಟದ ಆಡಳಿತ ಮಂಡಳಿ
ಸದಸ್ಯರಾದ ನಿಕಟಪೂರ್ವ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಇತರ ಬಂಟರ
ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಆಡಳಿತ
ಮಂಡಳಿ ಸದಸ್ಯರು, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸಿಬ್ಬಂದಿವರ್ಗದವರು
ಹಾಗೂ ಫಲಾನುಭವಿಗಳು ಸೇರಿ 50 ಕ್ಕೂ ಸಮಾಜ ಬಾಂಧವರು
ಉಪಸ್ಥಿತರಿದ್ದರು.