ದುಬೈ: ವಿಶ್ವ ತುಳು ಸಮ್ಮೇಳನ ದುಬಾಯಿ 2018ರ ಅಲ್ ಐನ್
ತುಳುವರ ನೂತನ ಘಟಕವನ್ನು ಸಾಗರೋತ್ತರ ತುಳುವರ ಮುಖ್ಯ ಸಂಘಟಕರಾದ ಸರ್ವೋತ್ತಮ ಶೆಟ್ಟಿಯವರು ಉದ್ಘಾಟಿಸಿದರು.
ಅಲ್
ಐನ್ ವಿಭಾಗದ ತುಳುವರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಶೆಟ್ಟಿ, ಶಾಲಿನಿ ಡಿಸೋಜಾ ಹಾಗೂ ಕಾರ್ಯಧ್ಯಕ್ಶರಾಗಿ
ಆದರ್ಶ್ ಲೂವಿಸ್, ಉಮ್ಮರ್ ಫಾರೂಕ್ ಹಾಗೂ ಹದಿನಾರು ಮಂದಿ ಸದಸ್ಯರಾಗಿ ಜವಬ್ಧಾರಿಯನ್ನು ವಹಿಸಿಕೊಂಡರು.
ಅಲ್
ಐನ್ ಶಂಕರ್ ನಾಯಕ್ ರವರ "ಹಾಟ್ ಎನ್ ಸ್ಪೈಸಿ" ರೆಸ್ಟೊರೆಂಟ್ ನಲ್ಲಿ ಸೆ.21ರಂದು ನಡೆದ
ಸಭೆಯಲ್ಲಿ ಸರ್ವೋತ್ತಮ ಶೆಟ್ಟಿಯವರು ವಿಶ್ವ ತುಳು ಸಮ್ಮೇಳನದ ಪೂರ್ವ ತಯಾರಿಯ ಬಗ್ಗೆ ಪೂರ್ಣ ಮಾಹಿತಿಯನ್ನು
ನೀಡಿ ಸರ್ವರ ಸಹಕಾರವನ್ನು ಕೋರಿದರು.
ಸಲಹಾ
ಸಮಿತಿಯ ಸದಸ್ಯರು ಹಾಗೂ "ವಿಶ್ವ ತುಳು ಐಸಿರಿ" ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾದ ಬಿ.
ಕೆ. ಗಣೇಶ್ ರೈ ಯವರು ಸ್ಮರಣ ಸಂಚಿಕೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.