ಮಹಾಲಕ್ಷಿಯ ಅನುಗ್ರಹದಿಂದ ಸರಸ್ವತಿ ಸೇವೆ: ನ್ಯಾ. ಜಗನ್ನಾಥ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಹಾಲಕ್ಷಿಯ ಅನುಗ್ರಹದಿಂದ ಸರಸ್ವತಿ ಸೇವೆ: ನ್ಯಾ. ಜಗನ್ನಾಥ ಶೆಟ್ಟಿ

Share This
ಮುಂಬಯಿ: ಕಳೆದ ಒಂಬತ್ತು ವರ್ಷಗಳಿಂದ ಸತತವಾಗಿ ಸ್ಥಳದಲ್ಲಿ ಸಮಿತಿಯವರ ಹಾಗೂ ಭಕ್ತಾಭಿಮಾನಿಗಳ ಸಹಕಾರದಿಂದ ವರಮಹಾಲಕ್ಷೀ ಪೂಜೆ ನಡೆಸುತ್ತಿದ್ದು, ಇದರೊಂದಿಗೆ ಪರಿಸರದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತಾ ಬಂದಿದ್ದು ಮಹಾಲಕ್ಷಿಯ ಸೇವೆಯೊಂದಿಗೆ ಸಮಿತಿಯ ಮೂಲಕ ಸರಸ್ವತಿಯ ಸೇವೆಯನ್ನು ಮಾಡುತ್ತಿರುವೆವು. ಇದು ನಮ್ಮ ಸಮಿತಿಯ ಎಲ್ಲಾ ಸದಸ್ಯರ ಹಾಗೂ ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಾಧ್ಯ ಎಂದು ಮಲಾಡ್  ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ ಶೆಟ್ಟಿ ಯವರು ನುಡಿದರು.
ಸೆ. 9 ರಂದು  ಮಾಲಾಡ್ ಪೂರ್ವ ಕುರಾರ್ ವಿಲೇಜ್ ನ್ ಆನಂದವಾಡಿ ಜೀಜಾಮಾತಾ ಶಾಲೆಯ ಆವರಣದಲ್ಲಿ ಮಲಾಡ್  ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಆಶ್ರಯದಲ್ಲಿ 9 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮುಂದಿನ ವರ್ಷ ದಶಮಾನೋತ್ಸವವನ್ನಾಚರಿಸುತ್ತಿರುವ ನಮಗೆ ಒಂಬತ್ತನೇ ತರಗತಿ ಉತ್ತೀರ್ಣವಾಗಿ ಹತ್ತನೆಯ ತರಗತಿಯಲ್ಲಿನ ವಿದ್ಯಾರ್ಥಿಗಳು ತಯಾರಿಯಲ್ಲಿರುವಂತೆ, ನಮಗೂ ಪೂರ್ವ ಸಿದ್ದತೆ ಮಾಡಬೆಕಾಗಿದ್ದು ನಿಮ್ಮೆಲ್ಲರ ಸಹಾಯ ಬೇಕಾಗಿದೆ. ನಮ್ಮ ಸಮಿತಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ದೇಣಿಗೆಗಾಗಿ ಯಾರ ಬಳಿಗೂ ಹೋಗದೆ ಸಮಿತಿಯವರೇ ಎಲ್ಲವನ್ನು ನೀಡುತ್ತಿದ್ದು, ಇಲ್ಲಿ ಮಹಾಲಕ್ಷ್ಮೀಯ ಅನುಗ್ರಹ ವಿದೆ ಎಂದರು.

ಮೀರಾರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಶಾಂತಿಂಜ ಜನಾರ್ಧನ ಭಟ್ ಅವರ ಪೌರೋಹಿತ್ಯದಲ್ಲಿ ಮುಂಬಯಿಯ ಪತ್ರಕರ್ತ, ಬಿ. ದಿನೇಶ್ ಕುಲಾಲ್ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ  ಸದಾನಂದ ಕೋಟ್ಯಾನ್ ಮತ್ತು ಸಮಿತಿಯ ಸದಸ್ಯರಿಂದ ಹಾಗೂ ಶೇಖರ ಸಸಿಹಿತ್ಲು ಮತ್ತು ಬಳಗದವರಿಂದ ಬಜನೆ, ನಂತರ ಮಲಾಡ್ ಪರಿಸರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈಭವ ನಡೆಯಿತು.
ಗೌರವ ಅತಿಥಿಗಳಾಗಿ ವರ್ಲಿಯ ಅಪ್ಪಾಜಿ ಬೀಡು ಪೌಂಡೇಶನ್ ಸಂಸ್ಥಾಪಕ ರಮೇಶ್ ಗುರುಸ್ವಾಮಿ ಯವರು ಉಪಸ್ಥಿತರಿದ್ದು ಮಾತನಾಡುತ್ತಾ ತುಳು ನಾಡ ಮಣ್ಣಲ್ಲಿ ಹುಟ್ಟಿ ಬೆಳೆದು ಜೀವನಕ್ಕಾಗಿ ಮುಂಬಯಿಗಾಗಮಿಸಿದ ನಾವು ಇಲ್ಲಿ ನಮ್ಮ ದೇವರ ಸೇವೆ ಮಾಡುತ್ತಾ ನಮ್ಮ ಸಂಸ್ಕ್ಟುತಿ, ಸಂಸ್ಕಾರ,ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿರುವೆವು. ವರಮಹಾಲಕ್ಷ್ಮಿ ಪೂಜೆಯು ಮಹಿಳೆಯಿಂದ ಪ್ರಾರಂಭಗೊಂಡಿದೆ. ಮಹಾಗ್ರಹಣಿಯೊರ್ವಳು ಕಷ್ಟದಲ್ಲಿರುವಾಗ ಆಕೆಗೆ ದೇವರು ಕನಸಲ್ಲಿ ಬಂದು ಪೂಜೆಯನ್ನು ಮಾಡಲು ಹೇಳಿದಾಗ ಆಕೆ ಯಾವರೀತಿ ಪೂಜೆಯನ್ನು ಮಾಡಬೇಕೆಂದು ಕೇಳಿದ್ದು, ಶ್ರಾವಣ ಮಾಸದ ಎರಡನೇ ಶುಕ್ರವಾರ ಪೂಜೆಯನ್ನು ಮಾಡಬೇಕೆಂದರು. ಅಂತೆಯೇ ಆಕೆ ಇತರರಿಗೂ ತಿಳಿಸಿ  ವರಮಹಾಲಕ್ಷ್ಮೀ ಪೂಜೆಯನ್ನು ಮಾಡುದರ ಮೂಲಕ ತನ್ನ ಕಷ್ಟ ನಿವಾರಣೆ  ಮಾಡಿಕೊಂಡಳು ಎಂದ ಅವರು ಸ್ವತಂತ್ರ ಪೂರ್ವದಲ್ಲಿ ನಮ್ಮ ಮಹಾನ್ ವ್ಯಕ್ತಿಗಳು ಇಂತಹ ಪೂಜೆಗಳನ್ನು ನಡೆಸಿ ಸ್ವತಂತ್ರ ದೊರಕಿಸಿ ಕೊಟ್ಟಿರುವರು ಎಂದರು.

ಇನ್ನೋರ್ವ ಅತಿಥಿ ಮೊಗವೀರ ಮಹಾಜನ ಸಂಘ ಬಗ್ವಾಡಿ ಮೀರಾರೋಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ  ರಘುರಾಮ ಚಂದನ್ ಅವರು ಮಾತನಾಡುತ್ತಾ  ಮಲಾಡ್ ಪರಿಸರದ ತುಳು ಕನ್ನಡಿಗರ ಮಾತ್ರವಲ್ಲ ಇತರ ಸಮುದಾಯದವರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲು ಕಳೆದ ಒಂಬತ್ತು ವರ್ಷಗಳಿಂದ ವರಮಹಾಲಕ್ಷ್ಮಿ ಪೂಜೆಯ ಮೂಲಕ ಕಾರ್ಯನಿರತವಾಗಿರುವ ಸಮಿತಿಯ ಕಾರ್ಯ ಸ್ಲಾಘನೀಯ. ಇದು ಮುಖ್ಯವಾಗಿ ಮಹಿಳೆಯರ ಕಷ್ಟ ಗಳನ್ನು ದೂರ ಮಾಡುವ ಪೂಜೆ. ಭಕ್ತಿಯಿಂದ ಪೂಜೆ ಮಾಡಿದಲ್ಲಿ ಲಕ್ಷ್ಮಿ ಮನೆಯಲ್ಲಿ ಬಂದು ನೆಲೆಸಿಯಾಳು ಎಂದರು.

ಅತಿಥಿಗಳಾಗಿ ವೇದಿಕೆಯಲ್ಲಿ ಕುಲಾಲ ಸಂಘ ಚರ್ಚ್ ಗೇಟ್ - ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಸಾಲ್ಯಾನ್,  ಚಾಮುಂಡೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಕುಮಾರ್ ಗೌಡ, ಅಭ್ಯದಯ ಬ್ಯಾಂಕಿನ ಆಡಳಿತ ನಿರ್ದೇಶಕ ಪ್ರೇಮನಾಥ ಸಾಲ್ಯಾನ್, ಸಮಿತಿಯ ಗೌ. ಕಾರ್ಯದರ್ಶಿ ಗಣೇಶ್ ಎಲ್. ಕುಂದರ್, ಕೋಶಾಧಿಕಾರಿ ಜಗನ್ನಾಥ ಎಚ್. ಮೆಂಡನ್, ಸಂತೋಷ್ ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ಅತಿಥಿಗಳನ್ನು ಸತ್ಕರಿಸಿದರು. ರತ್ನಾ ಡಿ. ಕುಲಾಲ್ ಅವರು ಅಥಿತಿಗಳನ್ನು ಪರಿಚಯಿಸಿದರು.
ಸಮಿತಿಯ ವತಿಯಿಂದ ಮಹಾನಗರದಲ್ಲಿ ಸಾಧನೆಗೈದ  ಕರುಣಾಕರ ಶೆಟ್ಟಿ, (ಅಧ್ಯಕ್ಷರು, ಬ್ರಹನ್ಮುಂಬಯಿ ಕಸ್ಟಮ್ ಬ್ರೋಕರ್ಸ್ ಅಸೋಷಿಯೇಶನ್), ಇವರನ್ನು ಸನ್ಮಾನಿಸಲಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತುಅನಾರೋಗ್ಯ ಪೀಡಿತ ಸ್ಥಳೀಯರಿಗೆ ಸಹಾಯ ಹಸ್ತವನ್ನು ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈಭವ ಕಾರ್ಯಕ್ರಮಗಳನ್ನು ಶ್ರೀಮತಿ ಕುಮರೇಶ್ ಆಚಾರ್ಯ, ಸೌಮ್ಯ ಮೆಂಡನ್ ಮತ್ತು ಯೋಗೇಶ್ವರಿ ಗೌಡ ನಿವಹಿಸಿದರು. ಸಭಾ ಕಾರ್ಯಕ್ರಮಗಳನ್ನು ಬಿ. ದಿನೇಶ್ ಕುಲಾಲ್ ನಿರ್ವಹಿಸಿದರು.

ಸಂದರ್ಭದಲ್ಲಿ ಸಿ.. ಪರೀಕ್ಷೆಯಲ್ಲಿ ಉತ್ತಿರ್ಣರಾದ ರಾಜೇಶ್ ಮೂಲ್ಯ ಮತ್ತು ಅವರ ಹೆತ್ತವರನ್ನು ಸನ್ಮಾನಿಸಲಾಯಿತು.  ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ದಿನೇಶ್ ಕಾಮತ್ ರವರ ಸಹಭಾಗಿತ್ವದಲ್ಲಿ ಅನ್ನಸಂತರ್ಪಣೆ ನಡೆಯಿತು.

ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಮಿತಿಯ ಇತರ ಸದಸ್ಯರುಗಳಾದ ಸತೀಶ್ ಭಟ್,  ಸಂತೋಷ್ ಪೂಜಾರಿ,ದೇವು ಬಿ, ಕೋಟ್ಯಾನ್,  ಈಶ್ವರ ಕುಲಾಲ್,  ಶೈಲೇಶ್ ಪೂಜಾರಿ, ಮಹಾಬಲ ಪೂಜಾರಿ, ಉದಯ ಬಿ.ಸಾಲ್ಯಾನ್, ಮಹೇಶ್ ಗೌಡ, ಮೃತ್ಯಂಜಯ ಪಲ್ಲಿ, ಶೇಕರ ಪೂಜಾರಿ, ಎಸ್. ಬಿ. ಕೋಟ್ಯಾನ್, ಕುಮಾರೇಶ್ ಆಚಾರ್ಯ, ಚಂದ್ರಶೇಖರ ಶೆಟ್ಟಿ, ನಿತ್ಯಾನಂದ ಕೋಟ್ಯಾನ್, ಸುಂದರ ಪೂಜಾರಿ,ದಿನೇಶ್ ಕುಂಬ್ಳೆ, ದಿನೇಶ್ ಪೂಜಾರಿ, ಸೀತಾರಾಮ್ ಅಮೀನ್, ಸಿದ್ದರಾಮ ಗೌಡ, ಸೋಮನಾಥ ವಾಗ್ಲೆ,  ಅಂಡಾರ ಕೃಷ್ಣ ಪ್ರಭು, ರವಿ ಮೂಲ್ಯ, ಜಯರಾಮ ಪಾಟ್ಕರ್, ಸನತ್ ಪೂಜಾರಿ, ಪ್ರತೀಕ್ ಶೆಟ್ಟಿ, ಸಲಹೆಗಾರರಾದ  ಪರಮಾನಂದ ಜೆ. ಭಟ್, ರವಿ ಸ್ವಾಮೀಜಿ,  ಶ್ರೀನಿವಾಸ ಸಾಫಲ್ಯ, ಹರೀಶ್ ಶೆಟ್ಟಿ, ಪ್ರೇಮನಾಥ ಸಾಲ್ಯಾನ್ ಮತ್ತಿತರರು ಸಹಕರಿಸಿರುವರು. ವರದಿ : ಈಶ್ವರ ಎಂ. ಐಲ್

Pages