ಕಾಸರಗೋಡು ಚಿತ್ರದಿಂದ ಕನ್ನಡ ಹೋರಾಟಕ್ಕೆ ಇನ್ನಷ್ಟು ಸ್ಪೂರ್ತಿ : ವಿಜಯ ಕುಮಾರ್ ಶೆಟ್ಟಿ ಮಜಿಬೈಲ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಾಸರಗೋಡು ಚಿತ್ರದಿಂದ ಕನ್ನಡ ಹೋರಾಟಕ್ಕೆ ಇನ್ನಷ್ಟು ಸ್ಪೂರ್ತಿ : ವಿಜಯ ಕುಮಾರ್ ಶೆಟ್ಟಿ ಮಜಿಬೈಲ್

Share This
BUNTS NEWS, UAE: ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು -ಕೊಡುಗೈ ರಾಮಣ್ಣ ರೈ ಚಿತ್ರವು ಕೇರಳ ಕರ್ನಾಟಕದ ಚಿತ್ರ ಮಂದಿರದಲ್ಲಿ  ಭರ್ಜರಿ ಪ್ರದರ್ಶನವನ್ನು ಕಂಡು  ಸಾಗರದಾಚೆಗಿನ ದುಬಾಯಿಯಲ್ಲೂ ಅದ್ಬುತ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರವು ಪ್ರಪ್ರಥಮ ಭಾರಿಗೆ ಕಾಸರಗೋಡಿನಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದಲ್ಲಿ ಕಾಸರಗೋಡಿನ ಹಲವು ಯುವ ಕಲಾವಿದರು ನಟಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಮುಖ್ಯವಾಗಿ ನಮ್ಮ ಊರಿನ ಯಕ್ಷಗಾನ ಅರ್ಥಧಾರಿ ನಾಗರಾಜ ಪದಕಣ್ಣಾಯ ಮುಡಂಬೈಲ್ ಮುಖ್ಯೋಪಾಧ್ಯಯರ ಪಾತ್ರದ ಮೂಲಕ ಮೆಚ್ಚುಗೆಗಳಿಸಿದ್ದಾರೆ.

ವಿಜಯ ಕುಮಾರ್ ಶೆಟ್ಟಿ ಮಜಿಬೈಲ್
ಕೇರಳ ಕರ್ನಾಟಕದ ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಹಲವಾರು ಕನ್ನಡ ಪರ ಹೋರಾಟಗಳು ನಡೆಯುತ್ತಲೇ ಇದೆ. ಇಂತಹ ಸಮಯದಲ್ಲಿ ಇಲ್ಲಿನ ಸಮಸ್ಯೆಗಳನ್ನು ಚಿತ್ರದ ಮೂಲಕ ಸಮಾಜಕ್ಕೆ ಒಂದು ಒಳ್ಳೆ ಸಂದೇಶವನ್ನು ನೀಡುವುದರ ಮೂಲಕ ಕನ್ನಡ ಹೋರಾಟಕ್ಕೆ ಇನ್ನಷ್ಟು ಬೆಂಬಲ ಸಿಗುವಂತಾಗುತ್ತದೆ.

ಇನ್ನಾದರು ನಮ್ಮ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ. ಸೆಪ್ಟೆಂಬರ್ 20 ರಿಂದ 26 ವರೆಗೆ ದುಬಾಯಿಯಲ್ಲಿ ಪ್ರದರ್ಶನಗೊಳ್ಳಲಿದೆ. ದುಬಾಯಿಯಲ್ಲೂ ಚಿತ್ರವು ಯಶಸ್ವಿ ಪ್ರದರ್ಶನಗೊಂಡು ಮುಂದೆಯೂ ಇಂತಹ ಚಿತ್ರವು ತೆರೆ ಕಾಣಲಿ ಎಂದು ಹಾರೈಸುತ್ತೇನೆ - ವಿಜಯ ಕುಮಾರ್ ಶೆಟ್ಟಿ ಮಜಿಬೈಲ್ (ದುಬಾಯಿ)

Pages