ಅಶಕ್ತರಿಗೆ ವಿದ್ಯೆ ಕೊಡಿಸುವುದು ಬಂಟರ ಸಂಘದ ಜವಾಬ್ದಾರಿ : ನ್ಯಾ. ವಿಶ್ವನಾಥ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅಶಕ್ತರಿಗೆ ವಿದ್ಯೆ ಕೊಡಿಸುವುದು ಬಂಟರ ಸಂಘದ ಜವಾಬ್ದಾರಿ : ನ್ಯಾ. ವಿಶ್ವನಾಥ ಶೆಟ್ಟಿ

Share This
BUNTS NEWS, ಉಡುಪಿ: ನಮ್ಮ ಸಮಾಜದ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹುರಿದುಂಬಿಸುವುದು ಹಿರಿಯರ ಕರ್ತವ್ಯವಾಗಿದೆ. ಸರಿಯಾದ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು, ಅದನ್ನು ಪಡೆಯಲು ಅಸಮರ್ಥರಾದವರಿಗೆ ನೀಡುವುಡು ಬಂಟರ ಸಂಘದ ಜವಾಬ್ದಾರಿಯಾಗಿದೆ ಎಂದು  ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು ಹೇಳಿದರು.
ಅವರು ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮಿಲನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮಲ್ಲಿ ತುಂಬಾನೇ ಡಾಕ್ಟರ್, ಇಂಜಿನಿಯರ್, ವಕೀಲರಿದ್ದಾರೆ. ಆದರೆ ಐಎಎಸ್, ಐಪಿಎಸ್ ಆದವರು, ಸರ್ಕಾರಿ ಸೇಮೆಯಲ್ಲಿರುವವರ ಸಂಖ್ಯೆ ಕಡಿಮೆಯಿದೆ. ಬಂಟ ಸಮಾಜವು ನಿಷ್ಠೆ, ದಕ್ಷತೆಗೆ ಹೆಸರುವಾಸಿಯಾದ ಸಮಾಜವಾಗಿದ್ದು ಒಳ್ಳೆಯ ಅಧಿಕಾರಿಯಾದರೆ ಸಮಾಜದ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬಲ್ಲರು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂಟರು ಐಎಎಸ್, ಐಪಿಎಸ್ ಹಾಗೂ ಸರ್ಕಾರಿ ಹುದ್ದೆಗಳಿಗೆ ಪ್ರಯತ್ನಿಸಬೇಕೆಂದರು.

Pages