ಸಾಮಾಜಿಕ ಜಾಲತಾಣದಿಂದ ಯಕ್ಷಾಭಿಮಾನಿಗಳು ಒಂದುಗೂಡಿ ಯಕ್ಷಸೇವೆ ಮಾಡುವುದು ಶ್ಲಾಘನೀಯ: ಡಾ| ಬಿ.ಎ.ವಿವೇಕ್ ರೈ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಾಮಾಜಿಕ ಜಾಲತಾಣದಿಂದ ಯಕ್ಷಾಭಿಮಾನಿಗಳು ಒಂದುಗೂಡಿ ಯಕ್ಷಸೇವೆ ಮಾಡುವುದು ಶ್ಲಾಘನೀಯ: ಡಾ| ಬಿ.ಎ.ವಿವೇಕ್ ರೈ

Share This
BUNTS NEWS, ಮಂಗಳೂರು: ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕಲಾಸಕ್ತಮನಸ್ಸುಗಳನ್ನು ಜತೆಯಾಗಿಸಿಕೊಂಡು  ಯಕ್ಷಸೇವೆ ಮಾಡುವುದು ಹಾಗೂ ಯಕ್ಷಗಾನದ ಎಲ್ಲಾ ಹಂತಗಳಲ್ಲಿ ಬೆಳೆದವರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ವಿಶ್ರಾಂತ ಕುಲಪತಿ ಡಾ| ಬಿ..ವಿವೇಕ್ ರೈ ಅಭಿಪ್ರಾಯಪಟ್ಟರು.
ಅವರು ಪುರಭವನದಲ್ಲಿ ಶನಿವಾರ ರಾತ್ರಿ ನಡೆದ ವಾಟ್ಸಪ್ ಬಳಗವಾದ ಭ್ರಾಮರೀ ಯಕ್ಷಮಿತ್ರರು(ರಿ) ಮಂಗಳೂರು ಇದರ 3ನೇ ವರ್ಷದ ಯಕ್ಷವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಯಕ್ಷಗಾನದ ವಿಷಯಕ್ಕಾಗಿಯೇ ಮೀಸಲಿಟ್ಟ ವಾಟ್ಸಪ್ ಬಳಗವಾಗಿ ಆರಂಭಗೊಂಡು ನೋಂದಾಯಿಸಲ್ಪಟ್ಟ ಬಳಗವಾಗಿ ಭ್ರಾಮರೀ ಗುರುತಿಸಿಕೊಂಡಿದೆ‌. ಯಕ್ಷಗಾನದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿ ನೀಡಿ ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶ ಸರ್ವರಿಗೂ ಮಾದರಿ ಎಂದರು.

ಸನ್ಮಾನ –ಗೌರವ: ಖ್ಯಾತ ಹಿಮ್ಮೇಳ ಕಲಾವಿದ ಮೋಹನ ಶೆಟ್ಟಿಗಾರ್ ಮಿಜಾರ್ ಅವರಿಗೆ ಭ್ರಾಮರೀ ಯಕ್ಷಮಣಿ  ಪ್ರಶಸ್ತಿಯನ್ನು, ಪಟ್ಲ ಸತೀಶ್ ಶೆಟ್ಟಿಯವರಿಗೆ ಗೌರವ ಸನ್ಮಾನವನ್ನೂ ಹಾಗೂ ನೇಪಥ್ಯ ಕಲಾವಿದರಾದ ಬಿ.ಐತಪ್ಪ ಟೈಲರ್, ರಘು ಶೆಟ್ಟಿನಾಳ ಅವರನ್ನು ಸನ್ಮಾನಿಸಲಾಯಿತು.

ಮೇಯರ್ ಭಾಸ್ಕರ್ ಕೆ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್ ಬ್ರಿಟಿಷ್ ಬಯಲೋಜಿಕಲ್ಸ್ ವಲಯ ಪ್ರಬಂಧಕ ಸಿ.ಎಸ್ ಭಂಡಾರಿ, ಮನಾಪ ಮುಖ್ಯ ಸಚೇತಕ ಶಶೀಧರ ಹೆಗ್ಡೆ, ಉದ್ಯಮಿ ರಮೇಶ್ ಶೆಟ್ಟಿ ಕಾರ್ಕಳ, ಶಾರದಾ ಶಿಕ್ಷಣ ಸಮೂಹ  ಸಂಸ್ಥೆ ಪ್ರೋ|ಎಂ.ಬಿ.ಪುರಾಣಿಕ್, ಮುಖ್ಯ ಅತಿಥಿಗಳಾಗಿದ್ದರು. ಬಳಗದ ಅಧ್ಯಕ್ಷ ವಿನಯಕೃಷ್ಣ  ಕುರ್ನಾಡು ಸ್ವಾಗತಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರ್ವಹಿಸಿದರು. ನಂತರ ಪ್ರಸಿದ್ಧ ಕಲಾವಿದರಿಂದ ಸತ್ಯಹರಿಶ್ಚಂದ್ರ, ಶೂರ್ಪನಖಾ ವಿವಾಹ, ಮಕರಾಕ್ಷ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

Pages