BUNTS NEWS, ಮಂಗಳೂರು: ಕೊಡಗಿನ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್
ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು
ತುರ್ತು ಕೋರ್ ಕಮಿಟಿ ಸಭೆಯನ್ನು
ಕರೆದು ಮಾನವೀಯತೆಯ ನೆಲೆಯಲ್ಲಿ ಟ್ರಸ್ಟ್ ವತಿಯಿಂದ 2 ಲಕ್ಷ
ರೂ. ಧನಸಹಾಯವನ್ನು ಕರ್ನಾಟಕ ರಾಜ್ಯ ಮುಖ್ಯಮಂತ್ರಿ
ನೆರೆ ಪರಿಹಾರ ನಿಧಿಗೆ ನೀಡಿದರು.
ಅದರಂತೆ ಸನ್ಮಾನ್ಯ
ನಗರಾಡಳಿತ ಮತ್ತು ವಸತಿ
ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ
ಯು.ಟಿ ಖಾದರ್ ಸಮ್ಮುಖದಲ್ಲಿ
ದ.ಕ ಜಿಲ್ಲಾಧಿಕಾರಿಯವರಾದ
ಸಸಿಕಾಂತ್ ಸೆಂಥಿಲ್ ರವರಿಗೆ ಪಟ್ಲ
ಸತೀಶ್ ಶೆಟ್ಟಿಯವರು ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಫೌಂಡೇಶನಿನ ಪ್ರಧಾನ ಕಾರ್ಯದರ್ಶಿ ಅಡ್ಯಾರ್
ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುದೇಶ್
ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ
ಜಗನ್ನಾಥ ಶೆಟ್ಟಿ ಬಾಳ ಮತ್ತು
ಟ್ರಸ್ಟಿ ರವಿ ಶೆಟ್ಟಿ ಅಶೋಕನಗರ
ಜತೆಗಿದ್ದರು.