ಬಂಟರ ಸಂಘ ಸಿದ್ದಕಟ್ಟೆ ವಲಯ: 14ನೇ ವರ್ಷದ ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಸಂಘ ಸಿದ್ದಕಟ್ಟೆ ವಲಯ: 14ನೇ ವರ್ಷದ ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ

Share This
BUNTS NEWS NETWORK, ಬಂಟ್ವಾಳ: ಬಂಟರ ಸಂಘ ಸಿದ್ದಕಟ್ಟೆ  ವಲಯ ಇದರ 14ನೇ ವರ್ಷದ ಶೈಕ್ಷಣಿಕ ಪ್ರೋತ್ಸಾಹಧನ ವಿತರಣ ಕಾರ್ಯಕ್ರಮ ಜೂ.24ರಂದು ಸಿದ್ದಕಟ್ಟೆಯ ಅಕ್ಷಯ ಸಭಾಭವನದಲ್ಲಿ ಜರುಗಿತು.
ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ವಿವೇಕ ಶೆಟ್ಟಿ ನಗ್ರಿಗುತ್ತು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಿದ್ದಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷರಾದ ಶ್ರೀಧರ ಶೆಟ್ಟಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ,ಬಂಟ್ವಾಳ ತಾಲೂಕು ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ಪ್ರಸಾದ್ ರೈ, ಅರಳ ವಲಯ ಬಂಟರ ಸಂಘದ ಅಧ್ಯಕ್ಷೆ ರೂಪ ಶೆಟ್ಟಿ ಆಗಮಿಸಿದ್ದರು.

ವಲಯದ ವ್ಯಾಪ್ತಿಯ 8ರಿಂದ 12ನೇ ತರಗತಿಯವರೆಗಿನ ಒಟ್ಟು 80 ವಿದ್ಯಾರ್ಥಿಗಳಿಗೆ 50000ರೂ. ಶೈಕ್ಷಣಿಕ ಪ್ರೋತ್ಸಾಹಧನವನ್ನು ಸಂಘದ ವತಿಯಿಂದ ವಿತರಿಸಲಾಯಿತು. ವಿಷೇಷವಾಗಿ ರಾಮಕೃಷ್ಣ ಚೌಟ ಮಾಂಗಜೆ, ಸರೋಜಿನಿ ಶೆಟ್ಡಿ ಮತ್ತು ಮಕ್ಕಳು ಪೊಡುಂಬ, ದೇಜಣ್ಣ ಶೆಟ್ಟಿ ಮತ್ತು ಮಕ್ಕಳು ಗೋಳಿದೊಟ್ಡು, ಪದ್ಮರಾಜ ಬಲ್ಲಾಳ್ ಮವಂತೂರು, ಮಂದಾರತಿ ಎಸ್ ಶೆಟ್ಡಿ ಸಿದ್ದಕಟ್ಟೆ ಮತ್ತು ರಾಜೇಶ ಶೆಟ್ಟಿ ಕೊನೆರಬೆಟ್ಟು ಇವರು ಕೊಡಮಾಡಿದ ಶೈಕ್ಷಣಿಕ ಪ್ರೋತ್ಸಾಹಧನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಲಯ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಗಳಿಗೆ ಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ಸಮಾಜ ಬಾಂಧವರನ್ನು ಗುರುತಿಸಿ ಗೌರವಿಸಲಾಯಿತು.

ಸಿದ್ದಕಟ್ಟೆ ವಲಯ ವ್ಯಾಪ್ತಿಯ ಮೂರು ಗ್ರಾಮಗಳಾದ ರಾಯಿ, ಕೊಯಿಲ ಮತ್ತು ಪಂಜಿಕಲ್ಲು ಗ್ರಾಮಗಳು ಅರಳ ವಲಯಕ್ಕೆ ಸೇರ್ಪಡೆ ಆಗಿರುವ ಬಗ್ಗೆ ಮಾಹಿತಿ ನೀಡಲಾಯಿತು. SSLC ಮತ್ತು PUC ನಂತರದ ಆಯ್ಕೆಗಳ ಬಗ್ಗೆ ವಿವೇಕ ಶೆಟ್ಟಿಯವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರುಗಳಾದ ಪ್ರಫುಲ್ಲ ರೈ, ಗೋಪಿನಾಥ ರೈ, ಸ್ಥಾಪಕಾಧ್ಯಕ್ಷರಾದ ರಾಮಣ್ಣ ರೈ, ಕಾರ್ಯದರ್ಶಿ ಗಣೇಶ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರು ಪ್ರಾಸ್ತಾವಿಕ ಭಾಷಣದೊಂದಿಗೆ ಎಲ್ಲರನ್ನು ಸ್ವಾಗತಿದರು. ಕಾರ್ಯದರ್ಶಿ ವರದಿ ವಾಚಿಸಿದರು. ಮಂದಾರತಿ ಶೆಟ್ಟಿ, ಆರಾಧನ,ರತೀಶ್ ಶೆಟ್ಟಿ, ಖುಶಿ ಚೌಟ ವಿದ್ಯಾರ್ಥಿಗಳ ಪಟ್ಟಿ ಓದಿದರು. ಸಂಘಟನಾ ಕಾರ್ಯದರ್ಶಿ ಸುರೇಶ ಶೆಟ್ಟಿಯವರು. ವಂದಿಸಿದರು. ಜಯಶ್ರೀ ಚೌಟರವರು ಕಾರ್ಯಕ್ರಮ ನಿರೂಪಿಸಿದರು.

Pages