ಕಳೆದ 12 ವರ್ಷಗಳಿಂದ ಹಾಸಿಗೆಯಲ್ಲಿರುವ ನಾಗರಾಜ್ ಶೆಟ್ಟಿ ಅವರಿಗೆ ಬೇಕಿದೆ ನೆರವು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಳೆದ 12 ವರ್ಷಗಳಿಂದ ಹಾಸಿಗೆಯಲ್ಲಿರುವ ನಾಗರಾಜ್ ಶೆಟ್ಟಿ ಅವರಿಗೆ ಬೇಕಿದೆ ನೆರವು

Share This
ಬಂಟ್ಸ್ ನ್ಯೂಸ್ ವಲ್ಡ್, ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ನಿವಾಸಿ ಕೃಷ್ಣಯ್ಯ ಶೆಟ್ಟಿ ಮತ್ತು ಪ್ರೇಮ ಅವರ ಮಗ ನಾಗರಾಜ (31) ಕಳೆದ 12 ವರ್ಷಗಳಿಂದ ಹಾಸಿಗೆಯಲ್ಲೆ ದಿನದೂಡುತ್ತಿದ್ದಾರೆ.
ನಾಗರಾಜ ಅವರು 2005ರಲ್ಲಿ ವಿದ್ಯುತ್ ಕಂಬದಲ್ಲಿ ಕಾರ್ಯನಿರ್ವಹಿಸುವ ಸಂದರ್ಭ ಕಂಬದಿಂದ ಬಿದ್ದಿದ್ದರು. ಅವರು ವಿದ್ಯುತ್ ಕಂಬದಿಂದ ಬಿದ್ದ ತೀವ್ರತೆಗೆ ಸೊಂಟದ ಕೆಳಭಾಗ ಸ್ವಾಧೀನತೆ ಕಳೆದುಕೊಂಡಿದೆ. ಇದರಿಂದಾಗಿ ನಾಗರಾಜ್ ಅವರು ನಡೆದಾಡುವ ಶಕ್ತಿಯನ್ನು ಕಳೆದುಕೊಂಡಿದ್ದು ಹಾಸಿಗೆಯಲ್ಲೇ ದಿನದೂಡುತ್ತಿದ್ದಾರೆ.

ಹಲವು ಭಾರಿ ಶಸ್ತ್ರಚಿಕಿತ್ಸೆ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈಗಾಗಲೇ ಇವರೆಗಿನ ಚಿಕಿತ್ಸೆಗೆ ಸರಿ ಸುಮಾರು 9 ಲಕ್ಷದಷ್ಟು ಖರ್ಚಾಗಿದೆ. ಒಬ್ಬನೆ ಅಣ್ಣನ ಆದಾಯದಲ್ಲಿ ಅನಾರೋಗ್ಯ ಪೀಡಿತ ತಾಯಿ, ತಂದೆ ಹಾಗೂ ನಾಗರಾಜರ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಬಡ ಕುಟುಂಬಕ್ಕೆ ಕಷ್ಟವಾಗಿದೆ. ಸಹೃದಯಿಗಳು ನಾಗರಾಜ್ ಅವರಿಗೆ ನೆರವು ನೀಡಬೇಕಾಗಿ ಈ ಮೂಲಕ ಕೋರುತ್ತೇವೆ.
ನಾಗರಾಜ್ ಅವರಿಗೆ ನೆರವು ನೀಡಬಯಸುವವರು ಅಜೆಕಾರಿನ ಕಾರ್ಪೊರೇಶನ್ ಬ್ಯಾಂಕ್ ಶಾಖೆಯ ಖಾತೆ ನಂ. 520101229478634 IFSC CODE: CORP000098 ಇಲ್ಲಿಗೆ ಸಹಾಯಧನ ಕಳುಹಿಸಬಹುದು. ನಾಗರಾಜ್ ಅವರನ್ನು ಭೇಟಿಯಾಗಲಿಚ್ಛಿಸುವವರು ನಾಗರಾಜ ಶೆಟ್ಟಿ, ಬಿನ್ ಕೃಷ್ಣಯ್ಯ ಶೆಟ್ಟಿ, ಅನಂತ ನಿಲಯ, ಬಂಗ್ಲೆಗುಡ್ಡೆ, ಅಂಚೆ-ಅಜೆಕಾರು, ಮರ್ಣೆ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ಸಂಪರ್ಕಿಸಬಹುದು. ಮೊಬೈಲ್: 7760940737

(ವಿ.ಸೂ : ನಾಗರಾಜ್ ಅವರಿಗೆ ಸಹಾಯ ಧನ ಕಳಿಸಿದ ದಾನಿಗಳು ಈ ಬಗ್ಗೆ ಮಾಹಿತಿಯನ್ನು ಬಂಟ್ಸ್ ನ್ಯೂಸಿಗೆ ನೀಡಿ ಸಹಕರಿಸಬೇಕಾಗಿ ವಿನಂತಿ. Email: newsbunts@gmail.com, ಮೊಬೈಲ್: 9743166567 )

Pages