ಶಕ್ತಿ ಸಂಗಮ ಯಶಸ್ವಿಗೊಳಿಸಲು ಡಾ. ಆಶಾಜ್ಯೋತಿ ರೈ ಕರಿಬೈಲ್ ನಲ್ಲಿ ಕರೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶಕ್ತಿ ಸಂಗಮ ಯಶಸ್ವಿಗೊಳಿಸಲು ಡಾ. ಆಶಾಜ್ಯೋತಿ ರೈ ಕರಿಬೈಲ್ ನಲ್ಲಿ ಕರೆ

Share This
ಬಂಟ್ಸ್ ನ್ಯೂಸ್ ವಲ್ಡ್,ಮಂಜೇಶ್ವರ: ಬಂಟ ಸಮಾಜದ ಮಹಿಳೆಯರಿಗಾಗಿ . 26ರಂದು ಬೆಳಿಗ್ಗೆ 9ರಿಂದ ರಾತ್ರಿ 9 ವರೆಗೆ  ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ನಡೆಯಲಿರುವ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಬಂಟ್ಸ್ ಮಜಿಬೈಲ್ ಎಲ್ಲಾ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಮಾತೃಸಂಘದ ಮಹಿಳಾ ಘಟಕದ ರೂವರಿ ಡಾ. ಆಶಾಜ್ಯೋತಿ ರೈ ಕೋರಿದರು.
ಅವರು ಕರಿಬೈಲ್ ಮಹಾ ಮಲರಾಯ ದೈವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅನಾದಿ ಕಾಲದಿಂದಲೂ ಮಾತೃ ಪ್ರಧಾನವಾದ ಬಂಟ ಸಮಾಜವು ಮಹಿಳೆಯರಿಗೆ ವಿಶೇಷ ಸ್ಥಾನಮಾನಗಳನ್ನು ನೀಡಿದೆ. ಮಾತೃ ಸ್ವರೂಪಿಯಾದ ಹೆಣ್ಣು ಒಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ, ಸೊಸೆ, ಹೆಂಡತಿ ಮತ್ತು ಗೆಳತಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿತ್ತಾಳೆ. ಅವಳನ್ನು ಎಂದಿಗೂ ಸಂತೋಷದಿಂದ ಮತ್ತು ನಗುಮುಖದಿಂದ ನೊಡಿಕೊಳ್ಳುವುದು ನಮ್ಮೆಲ್ಲರ ಆಶಯ ಎಂದರು.
ಸಭೆಯಲ್ಲಿ ಶಿಲ್ಪ ಚೌಟ,ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮೊಹನ್ ರೈ, ಮುಕ್ತನಂದ ರೈ, ಕಾರ್ತಿಕ್ ಶೆಟ್ಟಿ ಮಜಿಬೈಲ್ ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳಿಗೆ ಚಂದ್ರಪ್ರಭ ಪ್ರವೀಣ್ ಶೆಟ್ಟಿ ಕರಿಬೈಲ್ , ಚಿತ್ರ ಪ್ರಸಾದ್ ಶೆಟ್ಟಿ ಹೊಸಮನೆ, ನಂದಿನಿ ಪ್ರದಿಪ್ ಶೆಟ್ಟಿ ಬಲ್ಲಂಗುಡೇಲ್, ಬಟ್ಯಪ್ಪ ರೈ ಕರಿಬೈಲ್,ವಿಶ್ವನಾಥ ಆಳ್ವ ಕರಿಬೈಲ್, ಆನಂದ ಆಳ್ವ ಮಾಟೆ ಶಾಲು ಇವರು ಹೊದೆಸಿ ಸ್ವಾಗತಿಸಿದ್ದರು. ಸಭೆಯ ನೆತೃತ್ವವನ್ನು ಕಾರ್ತಿಕ್ ಶೆಟ್ಟಿ ಮಜಿಬೈಲ್,ಉದಯ ಕುಮರ್ ಶೆಟ್ಟಿ ಕರಿಬೈಲ್, ವಿಜಯ್ ಕುಮರ್ ಶೆಟ್ಟಿ ಗಾಣದಮೂಲೆ, ಪ್ರದಿಪ್ ಶೆಟ್ಟಿ ಬಲ್ಲಂಗುಡೆಲ್, ರಾಜರಾಮ ಆಳ್ವ ಕರಿಬೈಲ್, ಸುದಕಾರ ಶೆಟ್ಟಿ ಕುಂಬೆಹಿತ್ಲು, ಸತೀಶ್ ಶೆಟ್ಟಿ ಕರಿಬೈಲ್ ವಹಿಸಿದ್ದರು. ಅಣ್ಣಪ್ಪ ಹೆಗ್ಡೆ  ಕರಿಬೈಲ್ ಸ್ವಾಗತಿಸಿ, ಶ್ರೀಮತಿ ವಿನೂತ ಉದಯ ಕುಮರ್ ಶೆಟ್ಟಿ ಕರಿಬೈಲ್ ದನ್ಯವಾದವಿತ್ತರು.

ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮತ್ತು ಮಹಿಳಾ ವಿಭಾಗ-ಶಕ್ತಿ ಅರ್ಪಿಸುವ ಅಂತರ್ ಜಿಲ್ಲಾ ಬಂಟ ಮಹಿಳೆಯರ ಸಮಾಗಮ "ಶಕ್ತಿ ಸಂಗಮ".26 ರಂದು ವಿವಿಧ ಆಟೋಟ ಸ್ಪರ್ದೆ, ವಿವಿಧ ವಿನೋದಾವಳಿ, ಆಹಾರ ಮೇಳ, ವಸ್ತುಪ್ರದರ್ಶನಗಳ  ಸಂಗಮದೊಂದಿಗೆ ಜರಗಲಿದೆವರದಿ: ವಿಜಯ ಕುಮರ್ ಶೆಟ್ಟಿ ಗಾಣದಮೂಲೆ

Pages