ಸೆ.18ಕ್ಕೆ ಬಂಟರ ಮಾತೃಸಂಘದ ಸಹಯೋಗದಲ್ಲಿ ಚಾಣಕ್ಯ IAS ಅಕಾಡೆಮಿ ವಿಚಾರಗೋಷ್ಠಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸೆ.18ಕ್ಕೆ ಬಂಟರ ಮಾತೃಸಂಘದ ಸಹಯೋಗದಲ್ಲಿ ಚಾಣಕ್ಯ IAS ಅಕಾಡೆಮಿ ವಿಚಾರಗೋಷ್ಠಿ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘವು ನವದೆಹಲಿಯ ಪ್ರಖ್ಯಾತ IAS ತರಬೇತಿ ಸಂಸ್ಥೆ ಚಾಣಕ್ಯ ಅಕಾಡಮಿ ಇವರ ಸಹಯೋಗದೊಂದಿಗೆ (UPSC)ಕೇಂದ್ರಿಯ ಲೋಕಸೇವಾ ಆಯೋಗದ IAS, IFS, IPS, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಲು ಮತ್ತು ಬಗ್ಗೆ ಮಾಹಿತಿ ನೀಡಲು ಉಚಿತವಾಗಿ ಸೆಮಿನಾರನ್ನು ಸೆ.18ರಂದು ಮಂಗಳೂರಿನ ಟೌನ್ಹಾಲ್ನಲ್ಲಿ ಬೆಳಿಗ್ಗೆ ಗಂಟೆ 10.00ರಿಂದ ಮಧ್ಯಾಹ್ನ 2.00ಗಂಟೆಯವರೆಗೆ ನಡೆಸಲಿದೆ.

ಸಕ್ಸಸ್ ಗುರು ಖ್ಯಾತಿವೆತ್ತ ಶ್ರೀ .ಕೆ ಮಿಶ್ರರವರು ಸೆಮಿನಾರನ್ನು ನಡೆಸಿಕೊಡಲಿದ್ದಾರೆ. IAS, IFS, IPS, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಜರಾಗಲು ಆಸಕ್ತಿ ಇರುವ ನಮ್ಮ ಎರಡು ಜಿಲ್ಲೆಗಳ 45ಕ್ಕಿಂತಲೂ ಹೆಚ್ಚು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕವರ್ಗ, ಆಡಳಿತಮಂಡಳಿಯವರು ಸೆಮಿನಾರ್ನಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ನಿಟ್ಟೆ ಯೂನಿರ್ವಸಿಟಿಯ ಚಾನ್ಸಲರಾದ ಡಾ. ಎನ್. ವಿನಯ ಹೆಗ್ಡೆಯವರು ಸೆಮಿನಾರನ್ನು ಉದ್ಘಾಟಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಅಂಬಾಸಿಡರ್ ಬಾಲಕೃಷ್ಣ ಶೆಟ್ಟಿ, IFS (ನಿವೃತ್ತ), ಎಸ್.ಸಿ. ಪಾಂಡ IAS, (ನಿವೃತ್ತಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಸಾರಭಾರತಿ ಇವರು ಭಾಗವಹಿಸಲಿದ್ದಾರೆ.

Pages