ದೇಶಸೇವೆಗೆ ನಾಗರಿಕ ಸೇವೆಗಿಂತ ಅತ್ಯುತ್ತಮವಾದದು ಬೇರೊಂದಿಲ್ಲ: ವಿನಯಕುಮಾರ್ ಹೆಗ್ಡೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದೇಶಸೇವೆಗೆ ನಾಗರಿಕ ಸೇವೆಗಿಂತ ಅತ್ಯುತ್ತಮವಾದದು ಬೇರೊಂದಿಲ್ಲ: ವಿನಯಕುಮಾರ್ ಹೆಗ್ಡೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಭವಿಷ್ಯದಲ್ಲಿ ಭಾರತ ಎತ್ತಸಾಗಬೇಕೆಂಬುದನ್ನು ನಿರ್ಧರಿಸುವವರು ನಾಗರಿಕ ಸೇವೆಯಲ್ಲಿರುವವರು. ಹಾಗಾಗಿ ಪ್ರತಿಭಾವಂತರು ಇಂತಹ ಉನ್ನತ ಹುದ್ದೆಯಲ್ಲಿರುವುದು ಉತ್ತಮ. ಕೇವಲ ವೈದ್ಯರು, ಇಂಜಿನಿಯರ್ಗಳು ಮಾತ್ರವೇ ದೇಶದ ಆಸ್ತಿಯಲ್ಲ. ಐಎಫ್ಎಸ್, ಐಎಎಸ್, ಐಪಿಎಸ್ ಅಧಿಕಾರಿಗಳು ದೇಶದ ಭವಿಷ್ಯವನ್ನು ರೂಪಿಸುತ್ತಾರೆ ಎಂದು ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವಿನಯಕುಮಾರ್ ಹೆಗ್ಡೆ ಹೇಳಿದರು.
ಅವರು ಸೋಮವಾರ ನಗರದ ಪುರಭವನದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಸಹಯೋಗದಲ್ಲಿ ದೆಹಲಿಯ ಚಾಣಕ್ಯ ಐಎಎಸ್ ಅಕಾಡೆಮಿ ನಡೆಸಿದ ಸೇಮಿನಾರ್ ಉದ್ಘಾಟಿಸಿ ಮಾತನಾಡಿದರು. ಉತ್ಕøಷ್ಣತೆಗೆ, ದೇಶಸೇವೆಗೆ ನಾಗರಿಕ ಸೇವೆಗಿಂತ ಅತ್ಯುತ್ತಮವಾದದು ಬೇರೊಂದಿಲ್ಲ. ಪದವಿ ಮುಗಿದ ಮೇಲೆ ಶಿಕ್ಷಣದ ಹಾದಿ ಮುಗಿಯಿತು ಎಂದುಕೊಳ್ಳುವುದಕ್ಕಿಂತ ಶಿಕ್ಷಣಕ್ಕೆ ಕೊನೆಯಿಲ್ಲ ಎಂದುಕೊಂಡರೆ ಐಎಎಸ್ ಕಷ್ಟವಲ್ಲ ಎಂದರು.

ಚಾಣಕ್ಯ ಸಂಸ್ಥೆಯ ಸ್ಥಾಪಕ .ಕೆ. ಮಿಶ್ರ ಮಾತನಾಡಿ, ಅವಿಭಜಿತ ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳಿಗೆ .8ರಂದು ಮಂಗಳೂರಿನಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ 180 ವಿದ್ಯಾರ್ಥಿಗಳು ಆಯ್ಕೆಯಗಲಿದ್ದು, ಅವರಲ್ಲಿ ಮೊದಲ ರ್ಯಾಂಕ್ ಪಡೆದ ಮೂವರಿಗೆ ಉಚಿತ ಶಿಕ್ಷಣ, ನಂತರದ ಹತ್ತು ಮಂದಿಗೆ ಶುಲ್ಕದಲ್ಲಿ ಶೇ.50ರಷ್ಟು ಹಾಗೂ ಉಳಿದವರಿಗೆ ಶೇ.25ರಷ್ಟು ಕಡಿತ ನೀಡಲಾಗುವುದು ಎಂದು ಹೇಳಿದ್ದಾರೆ.

ನಿವೃತ್ತ ಐಎಫ್ಎಸ್ ಆಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಸಿ. ಪಂಡ ನಾಗರಿಕ ಸೇವಾ ಪರೀಕ್ಷೆಗಳನ್ನು ಕೈಗೊಳ್ಳಲು ಇರಬೇಕಾದ ಕೌಶಲ್ಯಗಳ ಬಗ್ಗೆ ತಿಳಿಸಿದ್ದಾರೆಚಾಣಕ್ಯ ಐಎಎಸ್ ಅಕಾಡೆಮಿಯ ಮುಖ್ಯ ಅಧಿಕಾರಿ ಯಶ್ನಿತ್ ಪುಷ್ಕರಣ್, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಪದಾಧಿಕಾರಿಗಳಾದ ಡಾ. ಆಶಾಜ್ಯೋತಿ ರೈ ಮಾಲಾಡಿ, ಕಾವು ಹೇಮನಾಥ ಶೆಟ್ಟಿ, ವಸಂತ ಶೆಟ್ಟಿ, ರವೀಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು.

Pages