ಬಂಟ್ಸ್ ನ್ಯೂಸ್.ಕಾಂ,
ಕಾಸರಗೋಡು: ಬದಿಯಡ್ಕದಲ್ಲಿ ನಡೆದ ವಿಶ್ವ
ತುಳು ಆಯೆನೊದಲ್ಲಿ ಅನಿವಾಸಿ ಭಾರತೀಯ ಕಲಾವಿದರಿಂದ “ಅಪ್ಪೆನ ತ್ಯಾಗ” ಎಂಬ ತುಳು ಕಿರುನಾಟಕ ಪ್ರದರ್ಶನಗೊಂಡಿತು.
www.buntsnews.com
ಅನಿವಾಸಿ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿರವರು ರಚಿಸಿ ನಿರ್ದೇಶನದ
ಜತೆ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಈ ಕಿರುನಾಟಕದಲ್ಲಿ ತಾಯಿಯ ಪ್ರೀತಿ ಮತ್ತು ತ್ಯಾಗ ಎಷ್ಟೊಂದು
ಶ್ರೇಷ್ಠ ಎನ್ನುವುದು ಸಮಾಜಕ್ಕೆ ತೋರಿಸಿಕೊಡುವ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. www.buntsnews.com
ಈಗಾಗಲೇ ದುಬೈ ಮತ್ತು ಅಬುದಾಬಿಯಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಜಯರಾಮ
ರೈ ಸೇರಿದಂತೆ ಸುವರ್ಣ ಸತೀಶ್, ಸಂಪತ್ ಶೆಟ್ಟಿ, ಸುರೇಖಾ ಶೆಟ್ಟಿ ಮೊದಲಾದ ಯುಎಇ ಕಲಾವಿದರು ಪಾತ್ರ
ವಹಿಸಿದ್ದಾರೆ. ಈ ಸಂದರ್ಭ ವಿಶ್ವ ತುಳು ಆಯೆನೊದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹಾಗೂ ಅಖಿಲ ಭಾರತ
ತುಳು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ದೇವಾಡಿಗ ಕಲಾವಿದರೆಲ್ಲರನ್ನು
ಗೌರವಿಸಿ ತುಳು ಭಾಷೆಯ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. www.buntsnews.com