ಎಲ್ಲರೂ ಒಂದಾಗಿ ಐಕ್ಯತೆಯಿಂದ ಇದ್ದಾಗ ಸಮಾಜ ಪರ ಚಿಂತನೆ ಸಾಧ್ಯ: ಜಯರಾಮ ಸಾಂತ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎಲ್ಲರೂ ಒಂದಾಗಿ ಐಕ್ಯತೆಯಿಂದ ಇದ್ದಾಗ ಸಮಾಜ ಪರ ಚಿಂತನೆ ಸಾಧ್ಯ: ಜಯರಾಮ ಸಾಂತ

Share This
ಬಂಟ್ಸ್ ನ್ಯೂಸ್, ಸುರತ್ಕಲ್ : ಪರಸ್ಪರ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸಿಕೊಂಡು ನಾವೆಲ್ಲರೂ ಐಕ್ಯತೆಯಿಂದ ಇದ್ದಾಗ ಮಾತ್ರ ಸಮಾಜ ಪರ ಚಿಂತನೆ ಬೆಳೆಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ಜಯರಾಮ ಸಾಂತ ಹೇಳಿದರು.
ಅವರು  ಡಿ.18 ರಂದು ಬಂಟರ ಸಂಘ(ರಿ) ಸುರತ್ಕಲ್ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ ಇವರ ಸಹಯೋಗದಲ್ಲಿ ಗೋವಿಂದದಾಸ ಕಾಲೇಜು ಮೈದಾನದಲ್ಲಿ ನಡೆದ ಬಂಟರ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. www.buntsnews.com

ನಮ್ಮ ದುಡಿಮೆಯ ಒಂದಂಶ ಭಾಗವನ್ನು ಸಮಾಜಕ್ಕೆ ದಾರೆ ಎರೆದಾಗ ಭಗವಂತನ ಕೃಪೆ ದೊರೆಯಲು ಸಾಧ್ಯ ಎಂದು ಸಮಾಜಮುಖಿ  ಉತ್ತಮ ಚಿಂತನೆ ನಮ್ಮ ಜೀವನವನ್ನು ಯಶಸ್ವಿ ಕಡೆ ಕೊಂಡೊಯ್ಯುತ್ತಿದೆ ಜನಪರ ಸೇವೆಯಿಂದ ಶ್ರೇಷ್ಠರಾಗಿ ಮಾತೃ ಭಾಷೆ ಶಿಕ್ಷಣವು ನಮ್ಮ ವ್ಯಕ್ತಿತ್ವವನ್ನು ವಿಕಸನ ಮಾಡುವಲ್ಲಿ ಸಹಕಾರಿಯಾಗಿದೆ  ಎಂದವರು ತಿಳಿಸಿದರು. ಸುರತ್ಕಲ್ ಗೋವಿಂದದಾಸ ಕಾಲೇಜ್ ಪ್ರಾಚಾರ್ಯ ಡಾ| ಮುರಳೀಧರ ರಾವ್ ಮಾತನಾಡಿ  ಆರೋಗ್ಯವಂತ ವ್ಯಕಿತ್ವ ನಿರ್ಮಾಣವಾಗಲು   ಕ್ರೀಡಾ ಮನೋಭಾವನೆಯನ್ನು ಮೈಗೂಡಿಸಬೇಕು, ವಿಜ್ಞಾನ ಕ್ಷೇತ್ರಕ್ಕೂ ಕ್ರೀಡೆಗೂ ಮಹತ್ವವಾದ ಸಂಬಂಧವಿದೆ  ಎಂದರು. www.buntsnews.com

ಅಧ್ಯಕ್ಷತೆಯನ್ನು ಸುರತ್ಕಲ್  ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ವಹಿಸಿದ್ದರು. ಗುತ್ತಿಗೆದಾರ ಬಿ.ಬಿ. ರೈ, ಉದ್ಯಮಿ ಬೊಳ್ಳಾರುಗುತ್ತು ಮನೋಹರ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ, ಬಂಟರ ಸಂಘ ಸುರತ್ಕಲ್  ಕ್ರೀಡಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜಾಕಾರ್ಯದರ್ಶಿ ಸೀತಾರಾಮ ರೈ, ಕೋಶಾಧಿಕಾರಿ  ಪ್ರವೀಣ್ ಪಿ. ಶೆಟ್ಟಿ ಉಪಸ್ಥಿತರಿದ್ದರು. www.buntsnews.com

Pages