ಬಂಟ್ಸ್ ನ್ಯೂಸ್.ಕಾಂ, ಬೆಂಗಳೂರು: ಕ್ರಿಕೆಟ್ ಪಂದ್ಯಾಟದ ಸಂದರ್ಭ ಕ್ರೀಡಾಪಟು ರಾಜೇಶ್
ಶೆಟ್ಟಿ ಅಚ್ಲಾಡಿ (27) ಅವರು ಹೃದಯಾಘಾತದಿಂದ ನಿಧನರಾದ ಘಟನೆ ಬಿಇಎಲ್ ಅಂಗಣದಲ್ಲಿ ಶನಿವಾರ ನಡೆದಿದೆ.
ಬೆಂಗಳೂರಿನ ಬಂಟರ
ಸಂಘದ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಎರ್ಪಡಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ರಾಜೇಶ್
ಶೆಟ್ಟಿ ಅವರು ಉಡುಪಿಯ ತಾಲೂಕಿನ ಅಚ್ಲಾಡಿಯಿಂದ ಆಗಮಿಸಿದ್ದರು. ಶನಿವಾರ ನಡೆದ ಮೊದಲ ಪಂದ್ಯಾಟದಲ್ಲಿ
ಉತ್ತಮ ಆಟ ಪ್ರದರ್ಶಿಸಿ ತಂಡ ಗೆಲ್ಲಿಸಿದ್ದರು. ಈ ಸಂದರ್ಭ ಎದೆ ಕಾಣಿಸಿದ್ದರೂ ನೋವು ನಿವಾರಕ ಮಾತ್ರೆ
ಸೇವಿಸಿ ಮುಂದಿನ ಪಂದ್ಯಾಟಕ್ಕೆ ಸಿದ್ದತೆ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ನೋವು ಹೆಚ್ಚಾದಾಗ
ಅವರನ್ನು ಸಮೀಪದ ಬಿಇಎಲ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.