ಕಟೀಲು ಅಮ್ಮನಿಗೆ ವಜ್ರದ ಕಿರೀಟ ಸಮರ್ಪಿಸಿದ ಬಂಟ ಸಹೋದರರು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಟೀಲು ಅಮ್ಮನಿಗೆ ವಜ್ರದ ಕಿರೀಟ ಸಮರ್ಪಿಸಿದ ಬಂಟ ಸಹೋದರರು

Share This
BUNTS NEWS, ಕಟೀಲು: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಬಂಟ ಸಹೋದರರು ವಜ್ರ ಖಚಿತ ಕಿರೀಟವನ್ನು ನೀಡಿದ್ದಾರೆ.
ಶ್ರೀ ದೇವಳ ಭಕ್ತರಾದ ಉದ್ಯಮಿ ಮಳವೂರಿನ ಪೊಪ್ಯುಲರ್ ಜಗದೀಶ ಶೆಟ್ಟಿ ಹಾಗೂ  ಮುಂಬೈನ ಉದ್ಯಮಿ ಕರುಣಾಕರ ಶೆಟ್ಟಿ ಸಹೋದರರು ಶ್ರೀ ದೇವಿಗೆ ವಜ್ರ ಖಚಿತ ಕಿರೀಟವನ್ನು ಶುಕ್ರವಾರ ಸಮರ್ಪಿಸಿದ್ದಾರೆ. ದೇವಳದ ಬಗ್ಗೆ ಅಪಾರ ಭಕ್ತಿ ಹೊಂದಿರುವ ಇವರು ಹಿಂದೆ ದೇವಳದ ವಸಂತ ಮಂಟಪಕ್ಕೆ ಚಿನ್ನದ ಕವಚಯನ್ನು ನೀಡಿದ್ದರು.

ವಜ್ರದ ಕಿರೀಟ ಸಮರ್ಪಣಾ ಸಂದರ್ಭ ದೇವಳದ ಆಡಳಿತ ಮೊಕ್ತೇಸರಾದ ಡಾ. ರವೀಂದ್ರನಾಥ ಪೂಂಜಾ, ಅನುವಂಶಿಕ ಅರ್ಚಕರಾದ ವಾಸುದೇವ ಅಸ್ರಣ್ಣ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. © www.buntsnews.com
---------------------------------------------------------------------------------------------------------------------

Pages