ಬೆಂಗಳೂರು ಬಂಟರ ಸಂಘದ ಚುನಾವಣೆ: ನಿಮ್ಮ ಆಯ್ಕೆ 'ಟೀಂ ಶಶಿಧರ್ ಶೆಟ್ಟಿ' ಆಗಿರಲಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೆಂಗಳೂರು ಬಂಟರ ಸಂಘದ ಚುನಾವಣೆ: ನಿಮ್ಮ ಆಯ್ಕೆ 'ಟೀಂ ಶಶಿಧರ್ ಶೆಟ್ಟಿ' ಆಗಿರಲಿ

Share This
BUNTS NEWS, ಬೆಂಗಳೂರು: ನಲ್ಮೆಯ ಬಂಟ ಭಾಂಧವರೇ, ಬೆಂಗಳೂರು ಬಂಟರ  ಸಂಘದ ಚುನಾವಣೆಯಲ್ಲಿ ಈ ಬಾರಿ ನಿಮ್ಮ ಆಯ್ಕೆ ಶಶಿಧರ ಶೆಟ್ಟಿ ಮತ್ತು ತಂಡವಾಗಿರಲಿ, ಇದು ಹಮ್ಮಬಿಮ್ಮಿಲ್ಲದ ಸಮರ್ಥ ತಂಡ.


- ಪ್ರಜ್ಞಾವಂತ ವಿದ್ಯಾವಂತ ಹಾಗೂ  ಸಮಾನ ಮನಸ್ಕರ ತಂಡ
- ಅಭಿವೃದ್ಧಿಯೇ ಮಂತ್ರ
- ಹಿರಿಯರಿಂದ ಆಶೀರ್ವಧಿಸಲ್ಪಟ್ಟ ತಂಡ
- ಅನೇಕ ವರ್ಷಗಳಿಂದ ಸಂಘ ಸಮುದಾಯಕ್ಕೆ ಸೇವೆ ಸಲ್ಲಿಸಿದ ನಂತರ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು
- ದೂರಗಾಮಿ ಚಿಂತನೆಗಳ ತಂಡ ಹಾಗೂ ಕನಸುಗಳನ್ನು ನನಸುಮಾಡುವ ಕಸುವು ಇರುವ ತಂಡ
- ಇಂಜಿನಿಯರ್ ,ಡಾಕ್ಟರ್, ಅಂ, ಹೋಟೆಲ್ ಉದ್ಯಮಿ,  ಯಕ್ಷಗಾನ ಕಲಾವಿದರು,  ಚಲನಚಿತ್ರ ನಟರು, ನಿರ್ದೇಶಕರುಗಳು ಈ ತಂಡದಲ್ಲಿದ್ದಾರೆ
- ಸ್ವಚ್ಛ ಹಾಗೂ ಸಾಮಾಜಿಕ ಕಳಕಳಿಯಲ್ಲಿ ಸಚ್ಚಾರಿತ್ರ್ಯರ ತಂಡ
ಕೆಂಜೂರು ಶಶಿಧರ ಶೆಟ್ಟಿ ಅಧ್ಯಕ್ಷೀಯ ಅಭ್ಯರ್ಥಿ: ಎರಡು ದಶಕಗಳಿಂದ ಸಂಘದಲ್ಲಿ ತೊಡಗಿಸಿಕೊಂಡಿರುವ ಸೇವಾಕಾಂಕ್ಷಿ ವ್ಯಕ್ತಿ. ಕೇವಲ ಯೋಜನೆಗಳನ್ನು ಹೇಳುವುದಲ್ಲ, ಕಾರ್ಯಗತ ಗೊಳಿಸಬಲ್ಲ ಸಾಮರ್ಥ್ಯವಂತ. ಬಡವ ಬಲ್ಲಿದರೊಡನೆ ಸಮಾನವಾಗಿ ಬೆರೆಯುವ ಮಧ್ಯಮ ವರ್ಗದ ನಿಜವಾದ ಯುವನಾಯಕ.
ಡಾ ಜಯರಾಮ ರೈ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ: 1964ರಿಂದ ಬೆಂಗಳೂರು ಬಂಟರ ಸಂಘದಲ್ಲಿ ಗುರುತಿಸಿಕೊಂಡಿರುವ ಅತ್ಯಂತ ಹಿರಿಯ ಸದಸ್ಯ. ಹೆಸರಾಂತ ಹೃದಯ ತಜ್ಞ. ಲೇಖಕ ಕವಿ ಹಾಗೂ ಸಂಘದ ಹಿರಿಮೆಯನ್ನು ಹೆಚ್ಚಿಸಬಲ್ಲ ಜ್ಞಾನಿ.
ಅಮೃತ್ ಪಿ.ರೈ ಮಹಿಳಾ ಉಪಾಧ್ಯಕ್ಷೆ: ಅನೇಕ ದಶಕಗಳ ಬಂಟರ ಸಂಘ ಮತ್ತು ಸೇವೆಯ ನಂತರ ಇದೀಗ ಅರ್ಹವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹಿರಿಯ ಬಂಟ ಗೃಹಿಣಿ
ಸಂಪನ್ನ ಕುಮಾರ ಶೆಟ್ಟಿ ಗೌರವ ಕಾರ್ಯದರ್ಶಿ: ಸಂಘವನ್ನು ಸಮರ್ಥವಾಗಿ ಮುನ್ನೆಡಿಸುವ ಸಾಮರ್ಥ್ಯವಂತರು. ನಿಷ್ಠಾವಂತ ಮತ್ತು ನೈಜ ಹೋರಾಟಗಾರರು.ಹಲವಾರು ವರ್ಷಗಳಿಂದ ಸಂಘದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡವರು.
ಜೊತೆ ಕಾರ್ಯದರ್ಶಿ ಗೀತಾಂಜಲಿ ಡಿ ಅಜಿಲ : ಭಾವೈಕ್ಯದಂತಹ ಯುವ ಸಮ್ಮೇಳನ ನಡೆಸಿದ ಹಿರಿಯ ಸದಸ್ಯೆ.ಸಮುದಾಯದ ಗೌರವ ಹಾಗೂ ಘನತೆಗಳನ್ನು ಇನ್ನಷ್ಟು ಎತ್ತರಕ್ಕೆ ಏರಿಸಬಲ್ಲವರು.
ಖಜಾಂಚಿ ಸುರೇಶ ಹೆಗ್ಡೆ ಕೊಳ್ಕೆಬೈಲು: 25ವರ್ಷಗಳಿಂದ ಸಮುದಾಯದ ಸೇವೆಯಲ್ಲಿರುವ ಅಜಾತಶತ್ರು. ಯಾರಿಗೂ ಕೆಟ್ಟದನ್ನು ಬಯಸದ ನಿಜವಾದ ಸರಳ ವ್ಯಕ್ತಿತ್ವ. ಪ್ರಾಮಾಣಿಕತೆ ಮತ್ತು ಸೇವಾಮನೋಭಾವದ ಸಹಕಾರ.
ಇಂತಹ ಸರ್ವ ಸಮರ್ಥ ಸಮಷ್ಟಿಯ ತಂಡವನ್ನು ಆರಿಸಿ ಗೆಲ್ಲಿಸಿ ಬಂಟರ ಸಂಘದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗೊಣ. ನಿಮ್ಮ ಅತ್ಯಮೂಲ್ಯ ಮತ ಬಂಟರ ಸಂಘದ ಭವಿಷ್ಯತ್ತನ್ನೆ ಬದಲಿಸುವ ಅಭಿವೃದ್ಧಿಯತ್ತ ದಾಪುಗಾಲು. ನಮ್ಮೆಲ್ಲ ಹೊಸ ಕನಸುಗಳು ಹೊಸ ಚಿಂತನೆಗಳೊಂದಿಗೆ ಬಂಟರ ಸಂಘದಲ್ಲಿ ಹೊಸ ಭಾಷ್ಯ ಬರೆಯಲಿದ್ದೇವೆ ಎಂಬ ಭರವಸೆಯೊಂದಿಗೆ ನಿಮ್ಮೆಲ್ಲರ  ಸಹಕಾರ ಕೋರುತ್ತ
ನಿಮ್ಮ ಸೇವಾಕಾಂಕ್ಷಿಗಳು
#TEAM Shashidhar Shetty#

Pages