ಸಮಾಜಕ್ಕೆ ಬಂಟರ ಕೊಡುಗೆ ಮಹತ್ತರವಾದುದು: ಯು.ಟಿ.ಖಾದರ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಮಾಜಕ್ಕೆ ಬಂಟರ ಕೊಡುಗೆ ಮಹತ್ತರವಾದುದು: ಯು.ಟಿ.ಖಾದರ್

Share This
ಮಂಗಳೂರು: ಬಂಟ ಸಮಾಜದವರು ಕ್ರಿಯಾಶೀಲರುಸಮಾಜಕ್ಕೆ ಬಂಟರ ಕೊಡುಗೆ ಮಹತ್ತರವಾದುದುಜಿಲ್ಲೆಯ ಸರ್ವರಿಗೂ ಶ್ರೀ ಗಣಪತಿಯ ಆಶೀರ್ವಾದ ಇರಲಿಯುವಜನತೆ ಹಿರಿಯರ ಆಶೀರ್ವಾದ ಪಡೆದರೆ ಸರ್ವಾಂಗೀಣ ಅಭಿವೃದ್ಧಿ ಸಾಧ್ಯಜಿಲ್ಲೆ ಮಾತ್ರವಲ್ಲ ಬಂಟರು ಮುಂಬಾಯಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ಹಾಸ್ಟೆಲ್ ಓಂಕಾರ ನಗರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರುದೇವರ ಪೂಜೆಯಲ್ಲಿ ಶ್ರದ್ಧಾ ಭಕ್ತಿಮುಖ್ಯಕಷ್ಟ ಕಾರ್ಪಣ್ಯ ನಿವಾರಣೆಗೆ ದೇವರ ಅನುಗ್ರಹ ಅಗತ್ಯ ಎಂದು ಕ್ರೀಡಾ ಯುನಜನ ಇಲಾಖೆ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ತಿಳಿಸಿದರುಗಣೇಶೋತ್ಸವ ಭಾವೈಕ್ಯತೆಯ ಸಂಕೇತ ಹಬ್ಬವನ್ನು ಜಾತಿ ಮತ ಭೇದ ಇಲ್ಲದೆ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಮೊಯ್ದೀನ್ ಬಾವರೆ.ಡಾ.ಹನಿಬಾಲ್ ಕಬ್ರಾಲ್ಶ್ರೀಮತಿ ಉರ್ಮಿಳಾ ರಮೇಶ್ಕೊಂಜಾಲುಗುತ್ತು ಪ್ರಭಾಕರ ಶೆಟ್ಟಿಪಾಲ್ಗೊಂಡು ಶುಭ ಹಾರೈಸಿದರುವಿವಿಧ ಕ್ಷೇತ್ರಗಳ ಸಾಧಕರಾದ ವಿಧಾನಪರಿಷತ್ ಸದಸ್ಯ ಐವನ್ ಡಿ'ಸೋಜಶ್ರೀಮತಿ ಜಾನಕಿ ಬ್ರಹ್ಮಾವರಆರೂರು ಪ್ರಭಾಕರ್ ರಾವ್ಡಾ.ವಿದ್ಯಾಧರ ಶೆಟ್ಟಿಶ್ರೀಮತಿ ನಿರ್ಮಲಾ ಕಾಮತ್ಡಾ.ಅತುಲ್ಕುಮಾರ್ ಶೆಟ್ಟಿಮನೋಹರ ಶೆಟ್ಟಿರೋಹಿತ್ ಕುಮಾರ್ ಕಟೀಲುಚಂದ್ರಹಾಸ ರೈ ಬೋಳ್ನಾಡುಗುತ್ತು ಅವರನ್ನು ಸನ್ಮಾನಿಸಲಾಯಿತುಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಮಾಲಾಡಿ ಅಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿಕೋಶಾಧಿಕಾರಿಕೃಷ್ಣರಾಜ ಸುಲಾಯಶಶಿರಾಜ್ ಶೆಟ್ಟಿ ಕೊಳಂಬೆಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿಎನ್ ರವಿರಾಜ ಶೆಟ್ಟಿಸಿ..ಮನಮೋಹನ್ ಶೆಟ್ಟಿ . ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಬಂಟ್ಸ್ಹಾಸ್ಟೆಲ್ ಓಂಕಾರನಗರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜ್ ಆಡಳಿತ ನಿರ್ದೇಶಕ ಡಾ.ಎಂ.ಮೋಹನ್ ಆಳ್ವರವರು ದೀಪ ಬೆಳಗಿಸಿ ಉದ್ಘಾಟಿಸಿದರುಸಮಾರಂಭದಲ್ಲಿ ಡಾ.ಮೋಹನ್ ಆಳ್ವರವರನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ ರೈಯವರು ಗೌರವಿಸಿದರುಡಾ.ಆಶಾಜೋತ್ಯಿರೈ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಂಟರ ಮಾತೃ ಸಂಘದ `ನಮ್ಮ ಸಂಪರ್ಕಮಾಸ ಪತ್ರಿಕೆ ಹೊಸ ವಿನ್ಯಾಸದಲ್ಲಿ ಪ್ರಕಟಗೊಂಡಿದ್ದುಅದನ್ನು ಸಚಿವ ಕೆ.ಅಭಯಚಂದ್ರ ಜೈನ್ ಬಿಡುಗಡೆಗೊಳಿಸಿದರುಪತ್ರಕರ್ತರಾದ ಬಿ.ರವೀಂದ್ರ ಶೆಟ್ಟಿ ಮತ್ತು ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರುಬಂಟರ ಮಾತೃ ಸಂಘದ ಜತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಸ್ವಾಗತಿಸಿದರುಮಂಜುಳಾ ಶೆಟ್ಟಿ ಮತ್ತು ಪ್ರಕಾಶ್ ಮೇಲಾಂಟ ಕಾರ್ಯಕ್ರಮ ನಿರ್ವಹಿಸಿದರುಅಶ್ವತ್ಥಾಮ ಹೆಗ್ಡೆ ವಂದಿಸಿದರು

Pages