ಪರಿಸರ, ಕೃಷಿ ಕಾಪಾಡದೇ ತುಳು ಸಂಸ್ಕೃತಿಗೆ ಭವಿಷ್ಯವಿಲ್ಲ: ಡಾ.ಗಣನಾಥ ಶೆಟ್ಟಿ ಎಕ್ಕಾರು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪರಿಸರ, ಕೃಷಿ ಕಾಪಾಡದೇ ತುಳು ಸಂಸ್ಕೃತಿಗೆ ಭವಿಷ್ಯವಿಲ್ಲ: ಡಾ.ಗಣನಾಥ ಶೆಟ್ಟಿ ಎಕ್ಕಾರು

Share This
ಮಂಗಳೂರು: ತುಳುನಾಡಿನ ಪರಿಸರ ಮತ್ತು ಕೃಷಿ ಸಂಸ್ಕೃತಿಯನ್ನು ಕಾಪಾಡದೇ ಹೋದಲ್ಲಿ ತುಳುನಾಡಿ ಸಂಸ್ಕೃತಿ ಹಾಗೂ ತುಳುವಿಗೆ ಭವಿಷ್ಯವಿಲ್ಲವೆಂದು ಉಡುಪಿ ಸರಕಾರಿ ಮಹಾವಿದ್ಯಾಲಯದ ಕನ್ನಡ ಸ್ತಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ಶನಿವಾರ ನಡೆದ ಬಿಸು ಸಮ್ಮಿಲನ ಕಾರ್ಯಕ್ರಮದಲ್ಲಿ 'ಬಿಸು ಪರ್ಬದ ಪೊರ್ಲು ತಿರ್ಲ್‌' ಕುರಿತು ಉಪನ್ಯಾಸ ನೀಡಿದರು.

ಇಂದಿನ  ಜಾಗತೀಕರಣ-ವ್ಯಾಪಾರೀಕರಣದ ಕಾಲಘಟ್ಟದಲ್ಲಿ ತುಳುನಾಡು ಮತ್ತು ತುಳು ಭಾಷೆ ಉಳಿಯಬೇಕಾದರೆ ನಮ್ಮ ಕೃಷಿ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ನಿಟ್ಟಿನಲ್ಲಿ ತುಳುವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ 'ಬಿಸು'ವಿನಂತಹ ಆಚರಣೆಗಳನ್ನು ಸಾಮೂಹಿಕವಾಗಿ ಮಾಡುವ ಅಗತ್ಯವಿದೆತುಳುವರ ಹೊಸ ವರ್ಷ ಆರಂಭದ ದಿನ ಬಿಸುವಾಗಿದ್ದು ಯಾವುದೇ ರೀತಿಯ ಕೆಲಸ ಆರಂಭಿಸಲು ಶುಭದಿನವಾಗಿದೆ ಎಂದರು.

 ಸಂದರ್ಭ ಬ್ರಿಗೇಡಿಯರ್ ನಿರಂಜನ್ ಹೆಗ್ಡೆ ನಿಟ್ಟೆಗುತ್ತುರಾಧಾಕೃಷ್ಣ ಶೆಟ್ಟಿಪ್ರಗತಿಪರ ಕೃಷಿಕ ರಮಾನಾಥ ಅತ್ತಾರ್ಭಾಷಾ ಉಪನ್ಯಾಸಕಿ ಡಾಸಾಯಿಗೀತಾ ಹೆಗ್ಡೆಕ್ರೀಡಾಪಟು ಹಾಗೂ ಯುವ ಕೃಷಿಕೆ ಪ್ರತಿಭಾ ಶೆಟ್ಟಿ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರುಕಾರ್ಯಕ್ರಮದಲ್ಲಿ ಶಾಸಕಿ ಶಕುಂತಳಾ ಟಿಶೆಟ್ಟಿಮುಂಬಯಿ ಬಂಟರ ಸಂಘದ ಅಧ್ಯಕ್ಷ ಶಂಕರ ಶೆಟ್ಟಿಬೆಂಗಳೂರಿನ ಹಿರಿಯ ಸಾಮಾಜಿಕ ಮಾರ್ಗದರ್ಶಕರಾದ ಶಶಿಕಲಾ ಅಡಪ್ಪಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿಕಾರ್ಯದರ್ಶಿ ಮೇಘನಾಥ ಶೆಟ್ಟಿಜತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿಕೋಶಾಧಿಕಾರಿ ಮನಮೋಹನ್ ಶೆಟ್ಟಿಸಂಚಾಲಕ ಜಯರಾಮ ಸಾಂತಸಹ ಸಂಚಾಲಕ ಉಮೇಶ್ ರೈ ಮತ್ತಿತರರು ಉಪಸ್ಥಿತರಿದ್ಧರು.

Pages