ಪದವಿಯಲ್ಲಿ 2 ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ರಾಜ್ಯಶ್ರೀ ಬಾರೆಬೆಟ್ಟುರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪದವಿಯಲ್ಲಿ 2 ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ರಾಜ್ಯಶ್ರೀ ಬಾರೆಬೆಟ್ಟುರಿಗೆ ಸನ್ಮಾನ

Share This
BUNTSNEWS, ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ 2014-15ನೇ ಸಾಲಿನ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ 2 ಚಿನ್ನದ ಪದಕ ಪಡೆದಿರುವ ರಾಜ್ಯಶ್ರೀ ಅಡ್ಯಂತಾಯ ಬಾರೆಬೆಟ್ಟು ಅವರ ಅನನ್ಯ ಸಾಧನೆ ಗುರುತಿಸಿ ಸಹೋದರ ಯುವಕ ಸಂಘ (ರಿ) ಬಾರೆಬೆಟ್ಟು ರಾಜ್ಯಶ್ರೀ ಅವರನ್ನು ಸನ್ಮಾನಿಸಿದೆ.
 
ಇತ್ತಿಚೇಗೆ ನಡೆದ ಸಹೋದರ ಯುವಕ ಸಂಘ (ರಿ) ಬಾರೆಬೆಟ್ಟು ಇದರ 26ನೇ ವಾರ್ಷಿಕೋತ್ಸವದಲ್ಲಿ ಸ್ವರ್ಣ ಪದವಿ ಪಡೆದ ರಾಜ್ಯಶ್ರೀ ಅಡ್ಯಂತಾಯ ಅವರನ್ನು ಸನ್ಮಾನಿಸಿ ಅಭಿನಂದಿಸಿಲಾಯಿತು. ಈ ಸಂದರ್ಭ ಊರ ಪ್ರಮುಖರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪದವಿಯಲ್ಲಿ 2 ಸ್ವರ್ಣ ಪದಕ ವಿಜೇತ ವಿದ್ಯಾರ್ಥಿನಿ ರಾಜ್ಯಶ್ರೀ ಅಡ್ಯಂತಾಯ ಬಾರೆಬೆಟ್ಟು ಅವರಿಗೆ ಬಂಟ್ಸ್ ನ್ಯೂಸ್.ಕಾಂ ಅಭಿನಂದಿಸುತ್ತಿದೆ. ಮುಂದೆ ರಾಜ್ಯಶ್ರೀ ಅಡ್ಯಂತಾಯ ಅವರು ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸುತ್ತಿದೆ.  www.buntsnews.com

Pages