ಬಂಟ್ಸ್ ನ್ಯೂಸ್, ಬೆಳ್ತಂಗಡಿ: ಶುಕ್ರವಾರ ಮುಂಜಾನೆ ಕಣ್ಮರೆಯಾಗಿರುವ ವಾಯುಸೇನೆಯ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ
ಗುರುವಾಯನಕರೆ ಯೋಧ ಏಕನಾಥ ಶೆಟ್ಟಿ ಅವರು ಕೂಡ ಇದ್ದಿರುವುದಾಗಿ ಶಂಕಿಸಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.
ಘಟನಾ ವಿವರ: ಶುಕ್ರವಾರ ಬೆಳಗ್ಗೆ ವಾಯುಸೇನೆಯ ಎಎನ್-32ರಲ್ಲಿ ಚೆನ್ನೈ ಯಿಂದ ಅಂಡಮಾನ್ನ ಪೋರ್ಟ್ ಬ್ಲೇರ್ಗೆ ಪ್ರಯಾಣಿಸುತ್ತಿದ್ದ
ಸಂದರ್ಭ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿತ್ತು. ಇದರಲ್ಲಿ ವಾಯುಸೇನೆಯ ಒಟ್ಟು 29 ಜನ ಸಿಬ್ಬಂದಿಗಳಿದ್ದರು
ಎನ್ನಲಾಗಿದೆ. ಪ್ರಯಾಣಿಕರಲ್ಲಿ ಕರ್ನಾಟಕದ ದ.ಕ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಯೋಧ ಏಕನಾಥರು
ಒಬ್ಬರಾಗಿದ್ದಾರೆ. ಯೋಧ ಏಕನಾಥರು ಈ ಹಿಂದೆ ಭೂ ಸೇನೆಯಲ್ಲೂ ಸೇವೆ ಸಲ್ಲಿಸಿದ್ದರು.