ವಾಯುಸೇನಾ ವಿಮಾನ ನಾಪತ್ತೆ ಘಟನೆ: ಬೆಳ್ತಂಗಡಿ ಯೋಧ ಏಕನಾಥ ಶೆಟ್ಟಿ ಕಣ್ಮರೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಾಯುಸೇನಾ ವಿಮಾನ ನಾಪತ್ತೆ ಘಟನೆ: ಬೆಳ್ತಂಗಡಿ ಯೋಧ ಏಕನಾಥ ಶೆಟ್ಟಿ ಕಣ್ಮರೆ

Share This
ಬಂಟ್ಸ್ ನ್ಯೂಸ್, ಬೆಳ್ತಂಗಡಿ: ಶುಕ್ರವಾರ ಮುಂಜಾನೆ ಕಣ್ಮರೆಯಾಗಿರುವ ವಾಯುಸೇನೆಯ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆ ಯೋಧ ಏಕನಾಥ ಶೆಟ್ಟಿ ಅವರು ಕೂಡ ಇದ್ದಿರುವುದಾಗಿ ಶಂಕಿಸಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.
ಘಟನಾ ವಿವರ: ಶುಕ್ರವಾರ ಬೆಳಗ್ಗೆ ವಾಯುಸೇನೆಯ ಎಎನ್‌-32ರಲ್ಲಿ  ಚೆನ್ನೈ ಯಿಂದ ಅಂಡಮಾನ್ ಪೋರ್ಟ್ಬ್ಲೇರ್ಗೆ ಪ್ರಯಾಣಿಸುತ್ತಿದ್ದ ಸಂದರ್ಭ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿತ್ತು. ಇದರಲ್ಲಿ ವಾಯುಸೇನೆಯ ಒಟ್ಟು 29 ಜನ ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಪ್ರಯಾಣಿಕರಲ್ಲಿ ಕರ್ನಾಟಕದ ದ.ಕ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಯೋಧ ಏಕನಾಥರು ಒಬ್ಬರಾಗಿದ್ದಾರೆ. ಯೋಧ ಏಕನಾಥರು ಈ ಹಿಂದೆ ಭೂ ಸೇನೆಯಲ್ಲೂ ಸೇವೆ ಸಲ್ಲಿಸಿದ್ದರು.

Pages