ಮಂಗಳೂರು: ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಸಮಾಜದ ಎಲ್ಲರೊಂದಿಗೆ ಬೆರೆಯುವ ವಿಶಾಲ ಮನೋಭಾವ ಹೊಂದಬೇಕೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಹೇಳಿದರು.
![](https://blogger.googleusercontent.com/img/b/R29vZ2xl/AVvXsEibuLT0Cp4zmrYqlKWkV7F0aqIdI2hqkmlIMbQtTkkGnr_QbSVbmVbWLEKNF5QDwWk-m4Zf_eNUIdf7lJvz8IMT4NS3XwFTlU5AEiZivRobVpkjot33gy6UQ1hohrqImooLCIY4gbGOyZXSLjEG-X-66ecoO954MRb0x9HEg_8Zq9eE-QydFl64Ysti5g/s16000/IMG_20220912_112857_copy_640x419.jpg)
![](https://blogger.googleusercontent.com/img/b/R29vZ2xl/AVvXsEhtZrQglBNKUy52gQi93hvL89gIkz3G7Vi2VTLBG18fpBX8PoaHwj_S1D_7WAoSt77lK5Fs8JxNEuAPMTGVbwwBYBaYinf2YbeFvAh7AquAuhb2Twm1cU5Nqtk5MVdlFL-9rqwVb5Oyva5PSCUyQcER9Feh1tVQyByhe95rKQrkigrejSlrsRgMNXtW7A/s16000/IMG_20220912_112917_copy_640x427.jpg)
![](https://blogger.googleusercontent.com/img/b/R29vZ2xl/AVvXsEg9ztALkM7drx-ukgWi8D71eT1Ef_MdcQ10OeeFlqWp0wJZWfqfL23cPv5EOF3_K5WvsaazfvAbT7rY2s-mVl-EequjpSg--1bmorLvahLKolNRNWWryRbYofDlPkjQ-6M-I8SwV5OvwwIeDzsbfSjFERYK6SYnblVnvpRcxVoKhC8CNUvvgeKrBw4tAg/s16000/IMG_20220912_113005_copy_640x446.jpg)
![](https://blogger.googleusercontent.com/img/b/R29vZ2xl/AVvXsEh6HiG5_PCzIJQI0xleKpD2Gx_4eItukaF-ubNv4h9JFXpFiM58vF2kr_DjFkl8w7GD-P9Qh2ayYkJt0FWG2ojnoJkQ9MFoSnjVorTZi6HJaz7PGXjaexQ9h-dc6QCgGajJ1jBeI42hM4_IbEnwdXx7d_AQD7gsspdOfoUFlKdFrBh24xS0vvnvBoje4A/s16000/IMG_20220912_112857_copy_640x419.jpg)
ಅವರು ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿರುವ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಸಿಎ ಶಾಂತರಾಮ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಕ್ರಿಯಾಶೀಲರಾದರೆ ಸಾಧನೆ ಸಾಧ್ಯ. ಪ್ರತಿಭಾ ಪುರಸ್ಕಾರದಿಂದ ಪ್ರತಿಭಾ ಪಲಾಯನ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಅವರು ಮಾತನಾಡಿ ಸಮಾಜದ ಯುವ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವ ಕಾರ್ಯ ಪ್ರಶಂಸನೀಯ ಎಂದರು.
ಆರ್ಥೊಪೆಡಿಕ್ಸ್ ಸರ್ಜನ್ ಡಾ. ಬಿ. ಸಚ್ಚಿದಾನಂದ ರೈ ಆವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಪುರಸ್ಕಾರ ಸ್ವೀಕರಿಸಿದವರ ಪರವಾಗಿ ವೀಕ್ಷಾ ವಿ. ಶೆಟ್ಟಿ, ಶ್ರೀಷ ಶೆಟ್ಟಿ ಅನಿಸಿಕೆ ವ್ಯಕ್ತ ಪಡಿಸಿದರು. ಒಟ್ಟು 77 ಮಂದಿ ಸಾಧಕರು ಪುರಸ್ಕಾರ ಸ್ವೀಕರಿಸಿದರು.
ಬಂಟರ ಸಂಘದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಉಲ್ಲಾಸ್ ಆರ್. ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಿರಣ್ ಪಕ್ಕಳ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಹ ಸಂಚಾಲಕ ಎನ್. ಮುರಳೀಧರ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಕಾರ್ಯಕ್ರಮ ನಿರೂಪಿಸಿದರು.