ಮಂಗಳೂರು: ಮಂಗಳೂರು ಸರಕಾರಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ಧು ತದನಂತರ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಾಹಿಸುತ್ತಿದ್ದು ಇದರ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಇವರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದಾರೆ. ಈ ಹಿಂದೆ ಇವರು ತಲಪಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಗೊಂಡು ಜನಸೇವೆ ಮಾಡಿರುತ್ತಾರೆ.
![](https://blogger.googleusercontent.com/img/b/R29vZ2xl/AVvXsEhluc7xvWI4TH63QsbzAti2jyt7KXMzBd3xQlNIiI-ucQGClSGmimDY6jJRkJaSyES8AGqAsQSsVRgVWccLO3qT4H2C1AcGTmU_cH-_mzyROLuMeG6_wjxtUdES0maGecO8g-WE7zR5RTbeAcUnZJ0yK91d-kWUEhOurryRbO_mqV_Ttf07hueS066U7w/s16000/IMG_20220710_113551.jpg)
![](https://blogger.googleusercontent.com/img/b/R29vZ2xl/AVvXsEiht8vCQXVqjsBZX4cETkbG9eaBmeS8JG_9khmbXcUtgAsIQZrtY4Ma-tQgTY8Cept-hfZHmXTSh-ESMUPCXsBHfE90j8RQW7nyWwiyKpD_MrBDiq7yb21Q6JRzxS0tzBhFmyxLCdQkSzX0SCk79V0qFMhUm_YGpjlfo2wO6bRoCYas9eTPhlUrw3PcAA/s16000/IMG_20220710_113551.jpg)
ಇದೀಗ ತುಳುನಾಡ ರಕ್ಷಣಾ ವೇದಿಕೆಯ ಮುಂಬೈ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪಕ್ಕಳರವರು 2009ರಲ್ಲಿ ಯೋಗೀಶ್ ಶೆಟ್ಟಿ ಜಪ್ಪುರವರ ನೇತೃತ್ವದಲ್ಲಿ ಸ್ಥಾಪನೆ ಗೊಂಡ ತುಳುನಾಡ ರಕ್ಷಣಾ ವೇದಿಕೆ ದೇಶ ವಿದೇಶಗಳಲ್ಲಿ ಘಟಕ ಗಳನ್ನು ಹೊಂದಿದ್ದು ಮುಂಬೈಯಲ್ಲಿ ಲಕ್ಷಾಂತರ ತುಳುವರು ತನ್ನ ಬದುಕು ಕಟ್ಟಿಕೊಳ್ಳಲು ನೆಲೆಸಿದ್ದು ತುಳುನಾಡ ರಕ್ಷಣಾ ವೇದಿಕೆ ಸಂಘಟನೆ ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಧಾರ್ಮಿಕ ಮಾರ್ಗದರ್ಶಕರಾದ ಶ್ರೀ ದುರ್ಗಾನಂದ ಸ್ವಾಮಿ, ಉಪಾಧ್ಯಕ್ಷರಾದ ಜೆ. ಇಬ್ರಾಹಿಂ, ಪ್ರದಾನ ಕಾರ್ಯದರ್ಶಿ ಕೆ.ವಿವೇಕಾನಂದ ರಾವ್, ಕೋಶಾಧಿಕಾರಿ ಪ್ರಶಾಂತ್ ಪೂಜಾರಿ, ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಡೊಲ್ಪಿ ಡಿಸೋಜ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.