ಕುಂದಾಪುರ: ಬಡಗುತಿಟ್ಟಿನ ಹಿರಿಯ ವೇಷಧಾರಿಗಳಾದ ಮಜ್ಜಿಗೆಬೈಲು ಆನಂದ ಶೆಟ್ಟಿ (78) ಜು.10ರಂದು ಕುಂದಾಪುರ ತಾಲೂಕಿನ ಯಡಾಡಿಯ ಸ್ವಗೃಹದಲ್ಲಿ ರಾತ್ರಿ ನಿಧನರಾದರು.
![](https://blogger.googleusercontent.com/img/b/R29vZ2xl/AVvXsEiLAjHWlWgrwpfMXlBaCk1B-CRar_w06xtAr0KqUgeLZM9-sQa5WqFmib4dDc9BFsUVSoDnNn5NEQ8WPRysQ72d2j3gaNKruhsXmt3NkKsJaPd9lHRRPh3n0FYRc74AUgacZuE2mPGq0Hl32vZGn-UPLeRwx8CL5NY7V7m189tQd29Q7Ttk_YUWKyTiIw/s16000/IMG_20220711_105605.jpg)
![](https://blogger.googleusercontent.com/img/b/R29vZ2xl/AVvXsEipKj9SaFqC1aBny0Yhclt1VTOyOi3kLibS5bMMrPE8POarVIY2W64SgUxp2Dsix0Q4i3VVEtH1iMjrLtzI3czBptTQlVh6-yB-1082llNsa-f2JnkLsKf7xbswCaq8J7cQ9MpZc_thB6nwAEf2bafJu3sFxe0Q7yCxJOnFBSu0hGM_ud4GYjRgy9seow/s16000/IMG_20220711_105605.jpg)
ಪರಂಪರೆಯ ಪ್ರಾತಿನಿಧಿಕ ಪುರುಷ ಮತ್ತು ಎರಡನೆ ವೇಷಧಾರಿಯಾಗಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪೆರ್ಡೂರು, ಮಾರಣಕಟ್ಟೆ, ಸಾಲಿಗ್ರಾಮ, ಗೂಳಿಗರಡಿ ಮತ್ತು ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ಹೀಗೆ ನಾಲ್ಕು ದಶಕಗಳ ಕಲಾಸೇವೆಗೈದ ಸಜ್ಜನ ಕಲಾವಿದರಾಗಿದ್ದರು.
ಯಕ್ಷಗಾನ ಕಲಾರಂಗ, ಜಾಗತಿಕ ಬಂಟ ಪ್ರತಿಷ್ಠಾನ ಸಹಿತ ಹಲವಾರು ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು. ಪತ್ನಿ ,ಮೂವರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಬಡಗು ತಿಟ್ಟಿನ ಈ ಪ್ರಾತಿನಿಧಿಕ ಕಲಾವಿದನ ನಿಧನಕ್ಕೆ ಉಡುಪಿಯ ಕಲಾರಂಗ ಮತ್ತು ಯಕ್ಷಾಂಗಣ ಮಂಗಳೂರು ತೀವ್ರ ಸಂತಾಪ ವ್ಯಕ್ತಪಡಿಸಿದೆ.