ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರಿಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಿದಂತೆ ಬಂಟ ಸಮುದಾಯದ ಶತಾಯುಷಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎನ್ನುವ ಗಡಿನಾಡ ಹೋರಾಟಗಾರ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಇವರ ಕುರಿತಾದ ಲೇಖನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸದೆ ಇರುವುದರ ಬಗ್ಗೆ ಸರಕಾರದ ಗಮನವನ್ನು ಸೆಳೆಯಲು ಮತ್ತು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಲು ಒತ್ತಾಯಿಸಿದ್ದರು.
![](https://blogger.googleusercontent.com/img/b/R29vZ2xl/AVvXsEiXZXZLNCZxsILSrQsvvEv-lzjAySF_7B9ajPTPBo5uUczKGRgZSQ3KF4-Fw_KVHSpzRtpvxa0twWQzvopUN6FNoDQSTltDOOsCTHxbDW_Dv0mFai-euS6y7e3KU7O-KUB7eUmM5gdoPXLaoeYC8cRYNc4Yg3B0jyZi0MbrYCO1j6CVMWsSFSir3mOK5w/s16000/IMG_20220701_122547_copy_480x579.jpg)
![](https://blogger.googleusercontent.com/img/b/R29vZ2xl/AVvXsEjg0P1dz5xZVZS5GR-kdxcBoDGX1ooUSeLZwI4K21Obe_a8K7JBVkS-wKPGW4zZmlPHxENBd5ZOxd6lrnO2Po0zzxAPCwPO6dfkRcga8_L9KwsfOM7zg-gL_OwglMT5qINwjcM-pdpedAQIe9wpRm8hSnOTbjEfoAEJjmD9YpRmtnBQZhQcgzp3KIw-Hw/s16000/IMG_20220701_122627_copy_640x440.jpg)
![](https://blogger.googleusercontent.com/img/b/R29vZ2xl/AVvXsEjSpDy98fadf80iG0IGgscYlyGfwF3sZNEIw_HBrloP8enX2hMZNlbRiObcVE_R6rPCkkCVmZc9DYhPhh__esyTS_L8HyMEgzLwCbOtmMPEnZ0MSLtsrtSgO0-I-90tGg1OZJaVSlKQ_hIXYdLWeQiQ5i4KxmT2EC-ZR-hhARPfdbm6xLMiEv1XKvJy-A/s16000/IMG_20220701_122547_copy_480x579.jpg)
ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ದಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜುಲೈ 1ರಂದು ಐಕಳ ಹರೀಶ್ ಶೆಟ್ಟಿಯವರ ನಿವಾಸಕ್ಕೆ ಭೇಟಿ ನೀಡಿ ವಿಸ್ತೃತ ಚರ್ಚೆಯನ್ನು ನಡೆಸಿದರು.
ಈ ಸಂದರ್ಭ ನಳಿನ್ ಕುಮಾರ್ ಅವರು ಸರಕಾರದ ಶಿಕ್ಷಣ ಸಚಿವ ನಾಗೇಶ್ ಅವರ ಜೊತೆ ಫೋನ್ ಮೂಲಕ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಜೊತೆ ಮಾತನಾಡಿಸಿ ಅದರಂತೆ ಪಠ್ಯಪುಸ್ತಕದಲ್ಲಿ ನಮ್ಮ ಹಿರಿಯ ಕವಿಯ ಹೆಸರನ್ನು ಹಿಂದಿನಂತೆ ಸೇರ್ಪಡೆಗೊಳಿಸುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರಿಗೆ ನೀಡಿದರು. ಅದರಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಮಾತನಾಡಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದರ ಜೊತೆ ಆರ್ಟಿಓ ಬಳಿ ಇರುವ ಎಬಿ ಶೆಟ್ಟಿ ಸರ್ಕಲ್ ಅನ್ನು ಕೂಡ ಶೀಘ್ರದಲ್ಲಿ ಅನುಷ್ಠಾನ ಮಾಡುವುದಾಗಿ ಸಂಸದರು ಭರವಸೆಯನ್ನು ನೀಡಿದರು.