ಮೂಲ್ಕಿ : ಬಂಟ ಸಮುದಾಯದ ಮತ್ತು ಇತರ ಸಮಾಜದ ಪ್ರೀತಿಗೆ ಪಾತ್ರರಾದ ಬಂಟರ ಸಮುದಾಯಕ್ಕೆ ಅನನ್ಯ ಕೊಡುಗೆ ನೀಡಿದ ಪ್ರಾತಃ ಸ್ಮರಣೀಯರಾದ ದಿ. ಸುಂದರ್ ರಾಮ್ ಶೆಟ್ಟಿ ಮುಲ್ಕಿ ಇವರ ಹೆಸರಿನಲ್ಲಿ ಮೂಲ್ಕಿ ಕಾರ್ನಾಡಿನಲ್ಲಿ ನಿರ್ಮಿಸಿದ ಮುಲ್ಕಿ ಸುಂದರಂ ಶೆಟ್ಟಿ ಕನ್ವೆನ್ಷನ್ ಸೆಂಟರಿನ ಲೋಕಾರ್ಪಣೆಯ ಪೂಜಾ ಕಾರ್ಯಕ್ರಮಗಳು ಏ.28ರಂದು ನಡೆಯಿತು.
![](https://blogger.googleusercontent.com/img/b/R29vZ2xl/AVvXsEjxHJ2gAtUMhUIlcChqSsyJ6p_bbnFUgdr6cJmEmX7kGdZFxk_ln98zKwOvoGg6PL7R1Gk86MxPS1ake60PTcdojZdq3SRIJadT9ohCtbdPNWnE7PE5WxAZcI_unREhjVxPMb0SFlznG_vMqczlZgRexCiz7LALtDe6r4bn-DefW2S5VmmEJyCtbgvlXw/s16000/IMG-20220426-WA0018_copy_582x518.jpg)
![](https://blogger.googleusercontent.com/img/b/R29vZ2xl/AVvXsEiDCNsYf-x0UVYmQvZrQV2MRYSRcvW20EPoSGAVuHpgENOZU9urLlEt-xbR7UCO0bnANw6D07RUdzQkAO7yU8E6ivwIQ2OmwzxamfmnG2FblySYxMBJWiWtQi1IgPwZNJjvIrcIAs5enLglf-IVUAEGTi4yMRIVzDB9lkEKkKLjk75YmROR4p-ytXVTiQ/s16000/IMG_20220430_182032_copy_560x556.jpg)
![](https://blogger.googleusercontent.com/img/b/R29vZ2xl/AVvXsEj2Z9LkRhwPLVYBfVWKj5jKEbKViXuZkgqfVg5vYVO0l1j655Gc-FSLc7cttVgvv_s0YITBs9caXzzJmqwOX7ZdbCX_L458Ys8qUJLPsBbBIoD2jbYguhsHccQrJQR8wueLfQn2j8sdvj7FHtk1EcgSfx88-eZP2r_iDB1oaD-MpZycdaUUO6VIO25ocA/s16000/IMG_20220430_182118_copy_640x450.jpg)
![](https://blogger.googleusercontent.com/img/b/R29vZ2xl/AVvXsEgaLUxSqsP-sNXW9tNxkE74m32sEwRVnDJZQSwTcKUDDwissLdCTTIAxYfu8GqVU2PQbJszYglDGe5a16shoOZDc1_f3rrYx-iVKSP4RIwfLNIIW3z9KMkINUU3Y1GLR61_OIiv-0W1O4pCqS8MqmpDk0DR7A7HB0bdtQ-NYUVdthojZP9bn204Fp6ZhA/s16000/IMG-20220426-WA0018_copy_582x518.jpg)
ಬೆಳಿಗ್ಗೆ ನಡೆದ ಗಣಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸುಂದರ್ ರಾಮ್ ಶೆಟ್ಟಿ ಮುಲ್ಕಿ ಕನ್ವೆನ್ಷನ್ ಸೆಂಟರ್ ರೂವಾರಿ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಿತು.
ಈ ದೇವತಾ ಕಾರ್ಯಕ್ಕೆ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು, ಬಂಟ ಸಮಾಜದ ಉದ್ಯಮಿಗಳು, ಸಮಾಜ ಸೇವಕರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯದರ್ಶಿ, ಪ್ರವೀಣ್ ಶೆಟ್ಟಿ ವಕ್ವಾಡಿ, ರವಿ ಶೆಟ್ಟಿ ಸಾಯಿ ರಾಧಾ ಉಡುಪಿ, ದಿನಕರ ಶೆಟ್ಟಿ ರಮಡ, ಸುರೇಶ್ ಶೆಟ್ಟಿ ಗುರ್ಮೆ, ಹರೀಶ್ ಶೆಟ್ಟಿ ರಮಡ, ಕಿಶೋರ್ ಶೆಟ್ಟಿ ಐಕಳ, ಮಾತೃಭೂಮಿ ಕೋಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ, ವಿಜಯ ಶೆಟ್ಟಿ, ಶ್ರೀದೇವಿ ಎಜುಕೇಶನ್ ಟ್ರಸ್ಟಿನ ಕಾರ್ಯಾಧ್ಯಕ್ಷ ಸದಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮಯೂರಿ ಫೌಂಡೇಶನ್ ಸಂಸ್ಥಾಪಕ ಜಯ ಕೆ ಶೆಟ್ಟಿ, ಸಿಎ ಸುಧೀರ್ ಕುಮಾರ್ ಶೆಟ್ಟಿ, ಜೀವನ್ ಶೆಟ್ಟಿ ಮುಲ್ಕಿ, ಹೇಮಂತ್ ಶೆಟ್ಟಿ, ರವಿ ಶೆಟ್ಟಿ ಜತ್ತ ಬೆಟ್ಟು, ಕೊಲ್ಲಾ ಡಿ ಬಾಲಕೃಷ್ಣ ರೈ ಉಪಸ್ಥಿತರಿದ್ದರು.
ಪಾಲ್ಗೊಂಡ ಎಲ್ಲರನ್ನೂ ಕೆ. ಪ್ರಕಾಶ್ ಶೆಟ್ಟಿ ಅವರು ಸ್ವಾಗತಿಸಿದರು. ಮಧ್ಯಾಹ್ನ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.