ಸುರತ್ಕಲ್ ಬಂಟರ ಸಂಘದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಸುರತ್ಕಲ್ : ಸಂಪ್ರದಾಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಸುರತ್ಕಲ್ ಬಂಟರ ಸಂಘ ಮಾಡುತ್ತಿದೆ. ಸಂಘ ಬಂಟ ಸಮಾಜಕ್ಕೆ ಮಾತ್ರ ಸೀಮಿತವಾಗದೆ, ಎಲ್ಲಾ ವರ್ಗದ ಜನರು ಮೆಚ್ಚುವ ಕಾರ್ಯವನ್ನು ಮಾಡುತ್ತಿದೆ. ಇಂತಹ ಸಮಾಜ ಕಾರ್ಯಗಳಿಗೆ ಹೆಸರುವಾಸಿಯಾಗಿರುವ ಸುರತ್ಕಲ್ ಬಂಟರ ಸಂಘಕ್ಕೆ ಅರ್ಹವಾಗಿಯೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲ್ಲಾ ಸಮುದಾಯದವರಿಗೂ ಯಕ್ಷಗಾನ ತರಬೇತಿ ನೀಡುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಿದೆ. ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ಸಂಘ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಬರಲಿ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಶುಭ ಹಾರೈಸಿದರು.
![](https://blogger.googleusercontent.com/img/b/R29vZ2xl/AVvXsEjI0ab03GedwJ4jkbQYc3Lz5KMTbprlj4QW2Gz8S-iHuJBKPoEvPTT7B2fl_aN96VvD9GQxblRdCKLqHKyhBxknlEhge1NrwUNg0nGzyGvJyt-peWnlJTF4XRLJygrOY_Pa8BvidzmfwYuFva2b4tZNBCPLKm9H77bchx2pxccgxOfIVRg4YE1BrHCUvA/s16000/IMG_20220502_175938_copy_640x425.jpg)
![](https://blogger.googleusercontent.com/img/b/R29vZ2xl/AVvXsEhgyAvEG4jSp1L42ef5OuDL4iwHT0OCJ79oClM8QFvfsPHzXNd_-D1RxOpkS-ell4KHdddVuuI7ujvlwCKoUE1vLidOwToKC6zoza8SwpLtghu2Q0aW9prX8kM1XovQ872bk9Ur6fl8ytJI2zUqal0DeUBX18QWEXLsnr-tnk7gzl5_48Tp10owoKVKrQ/s16000/IMG_20220502_175758_copy_640x511.jpg)
![](https://blogger.googleusercontent.com/img/b/R29vZ2xl/AVvXsEhfFqZW_FotkTe1LAg5g4Cfn81aSRRoO02TXx-F1xk7eeugvduNU26Qrk_CzkXuojl9LKjoWzRR4aqWO1dsNzPtKKiX3L29Xw4XSwp1f5k3uZX4c1LTAMTnbM2l0ytkTcErvxUNxbF_rYZ-h6IbT2tDZgZDmnt26dgv56mZVHLMgFpqz2yYq-euRHy02A/s16000/IMG_20220502_175938_copy_640x425.jpg)
![](https://blogger.googleusercontent.com/img/b/R29vZ2xl/AVvXsEi_lyP-EtYyjv2fUA4gogpx5Hae54MgYuzowXeYtT5tlYUa-fLnDm_DtIjvAXQYrgOlCuGO7wSJWJ363N99KWk40m2t-lAvpfsr_ZQBc6uEk9uhvT9ICml6A_oE9Re9eattDAJWhZROh1-L-RPzdoJF1gS5Mn5DuaQxuT_KjRKMtbumN_O9Ih6LAsPlFA/s16000/IMG_20220502_180014_copy_640x318.jpg)
![](https://blogger.googleusercontent.com/img/b/R29vZ2xl/AVvXsEibKHuazvIe8--3zmp9K8nwnqWboK4qA236mFpdKuY6s0gBoJw-siUCMrU4hjuuEisbN8DughHWfMr6OUUaIlBHEpwsuguMUhty5Xq_yytup5eow0lbIaf4Ogv_5mOQu4VBtRucSz4PLjf5mk0-9mWa4jq_476MCcY1hmqiwX_Bwk-mAkMg3syA2EYIgw/s16000/IMG_20220502_180050_copy_640x347.jpg)
![](https://blogger.googleusercontent.com/img/b/R29vZ2xl/AVvXsEiCifq1OEQXYuk3VlJSmGIfwRwK4jb6fCD09XmJ1T6EtF52FcLh8kJJAJDFNPd8QohLQ6SU6pgijKGAP6hRcao7YpBfhL1Ku0apFd6gnAnN46si7sztB-z9_FkvQSbCU_qaL7wqr6V-tR9yEkw5jRJJkxu7-ImAdfCun0JttoGMOYwKrLaK4Tn9nJE4wQ/s16000/IMG_20220502_180126_copy_640x420.jpg)
ಅವರು ಬಂಟರ ಸಂಘ(ರಿ.) ಸುರತ್ಕಲ್, ವಿಜಯ ಪಾಲಿಕ್ಲಿನಿಕ್ ಡಯಾಗ್ನಸ್ಟಿಕ್ ಸೆಂಟರ್, ವಿಜಯ್ ಮೆಡಿಕಲ್ಸ್ ಸುರತ್ಕಲ್ ಇದರ ಸಂಯುಕ್ತ ಆಶ್ರಯದಲ್ಲಿ ಬಂಟರ ಭವನದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಯಾರೂ ರೋಗ ಬರುವ ತನಕ ಕಾಯುವುದು ಬೇಡ, ಇಂತಹ ಉಚಿತ ಶಿಬಿರಗಳು ನಡೆಯುವಾಗ ಅಲ್ಲಿ ತಪಾಸಣೆ ನಡೆಸುವ ಮೂಲಕ ಅರೋಗ್ಯವನ್ನು ಕಾಯ್ದುಕೊಳ್ಳಿ. ಇದರಿಂದ ನೆಮ್ಮದಿಯ ಜೀವನ ನಡೆಸಿ. ಅರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ. ಈಗಿನ ಆಹಾರ ಪದ್ಧತಿಯಲ್ಲಿ ನಾನಾ ರೋಗಗಳ ಭಯ ನಮ್ಮನ್ನು ಕಾಡುತ್ತಿವೆ. ಅವುಗಳಿಗೆ ಭಯಪಡದೆ ಆಹಾರ ಪದ್ಧತಿ ಬದಲಿಸುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಿದ್ದರು. ಬಂಟರ ಸಂಘ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲು ಏಳು ಸಮಿತಿಗಳು ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ. ಆರೋಗ್ಯ, ಶಿಕ್ಣಣ, ವಸತಿ, ಕ್ರೀಡೆ, ಸಾಂಸ್ಕೃತಿಕ ಮೊದಲಾದ ಸಮಿತಿಗಳು ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆದಿದೆ ಎಂದು ಅವರು ತಿಳಿಸಿದರು.
ರಕ್ತದೊತ್ತಡ, ಮಧುಮೇಹ, ಸ್ತ್ರೀರೋಗ, ಚರ್ಮರೋಗ, ಎಲುಬು, ಜಠರ, ಪಿತ್ತಕೋಶ, ಅರ್ಬುದ (ಕ್ಯಾನ್ಸರ್) ಎಂಡೋಸ್ಕಪಿ, ಮೈಕ್ರೋಸ್ಕೋಪಿ, ನರಸಂಬಂಧಿ, ಮನೋರೋಗ, ಮೂತ್ರಕೋಶದ ಕಾಯಿಲೆ, ಹಾಗೂ ಮಕ್ಕಳ ಕಾಯಿಲೆಗಳ ತಪಾಸಣೆಯನ್ನು ಶಿಬಿರದಲ್ಲಿ ಮಾಡಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆದುಕೊಂಡರು.
ಮುಖ್ಯ ಅತಿಥಿಗಳಾಗಿ ಡಾ. ವಿಜಯ್ ಎಂ. ಬುದ್ನಾರ್, ಡಾ. ರಾಹುಲ್ ರಾವ್, ವಿಜಯ ಮೆಡಿಕಲ್ಸ್ ಮಾಲಕರಾದ ದಯಾನಂದ ಡಿ. ಶೆಟ್ಟಿ, ವೈದ್ಯಕೀಯ ಸಮಿತಿಯ ಸಂಚಾಲಕ ಪ್ರತಾಪ್ ಶೆಟ್ಟಿ, ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಮಹಿಳಾ ವೇದಿಕೆಯ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ ಉಪಸ್ಥಿತರಿದ್ದರು. ಲೋಕಯ್ಯ ಶೆಟ್ಟಿ ಸ್ವಾಗತಿಸಿ, ಪ್ರವೀಣ್ ಶೆಟ್ಟಿ ವಂದಿಸಿದರು. ಸುಧಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.