ದಯಾನಂದ ಶೆಟ್ಟಿ ಮಾಯಿಲ್ಕೋಡಿಗುತ್ತು ಅವರಿಗೆ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವದ ಗಡಿ ಪ್ರದಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದಯಾನಂದ ಶೆಟ್ಟಿ ಮಾಯಿಲ್ಕೋಡಿಗುತ್ತು ಅವರಿಗೆ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವದ ಗಡಿ ಪ್ರದಾನ

Share This
ಬಂಟ್ವಾಳ: ಮಾಯಿಲ್ಕೋಡಿಗುತ್ತು ಕುಟುಂಬದ ಯಜಮಾನರಾದ ದಯಾನಂದ ಶೆಟ್ಟಿ ಮಾಯಿಲ್ಕೋಡಿಗುತ್ತು ಅವರಿಗೆ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವದ ಗಡಿ ಪ್ರದಾನ ಮಾಡಲಾಯಿತು.
ಹಿರಿಯರಾದ ಮಾಯಿಲ್ಕೋಡಿ ಗುತ್ತು ತ್ಯಾಂಪು ಶೆಟ್ಟಲ್ ಎಂಬವರು ಹಲವು ವರ್ಷಗಳ ಕಾಲ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವದ (ಎರಡನೆ) ಮಾಯಿಲ್ಕೋಡಿಗುತ್ತು ಮನೆಯ ಗಡಿ ಪ್ರದಾನರಾಗಿದ್ದರು. ಅವರು ಕಾಲವಾದ ನಂತರ ಗಡಿ ಪ್ರದಾನವಾಗಿರಲಿಲ್ಲ. 

ಇತ್ತೀಚೆಗೆ ಮಾಯಿಲ್ಕೋಡಿಗುತ್ತು ಮನೆಯಲ್ಲಿ ನಡೆದ ಧರ್ಮ ನೇಮೊತ್ಸವದಲ್ಲಿ ಮಾಯಿಲ್ಕೋಡಿ ಗುತ್ತು ಕುಟುಂಬದ ಯಜಮಾನರಾದ ದಯಾನಂದ ಶೆಟ್ಟಿ ಮಾಯಿಲ್ಕೋಡಿಗುತ್ತು ಅವರಿಗೆ ಕಾಂಬೋಡಿಗುತ್ತು ಉಗ್ಗೆದಲ್ತಾಯ ದೈವದ ಗಡಿ ಪ್ರಧಾನರಾಗಿ ಗಂಧ ಬೂಲ್ಯ ನೀಡಲಾಯಿತು. ಇನ್ನು ಮುಂದೆ ಮಾಯಿಲ್ಕೋಡಿಗುತ್ತು ಮನೆಯಲ್ಲಿ ತನ್ನ ಸೇವೆಯನ್ನು ನಡೆಸಿಕೊಂಡು ಬರಲು ಶ್ರೀ ಉಗ್ಗೆದಲ್ತಾಯ ದೈವ ಅವರಿಗೆ ಅಭಯ ನೀಡಿತು.

Pages