ಎ.19 : 2022 ವರ್ಷದ ಪ್ರಥಮ 'ಅಂಗಾರಕ ಸಂಕಷ್ಟ ಚತುರ್ಥಿ' - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎ.19 : 2022 ವರ್ಷದ ಪ್ರಥಮ 'ಅಂಗಾರಕ ಸಂಕಷ್ಟ ಚತುರ್ಥಿ'

Share This

ಬಂಟ್ಸ್ ಮ್ಯೂಸ್, ಉಡುಪಿ: 2022ನೇ ವರ್ಷದ ಪ್ರಥಮ ಅಂಗಾರಕ ಸಂಕಷ್ಟ ಚತುರ್ಥಿಯು ಎ.19ರಂದು (ನಾಳೆ) ಬಂದಿದೆ.

ಮಂಗಳವಾರ ದಿನ ಬರುವ ಸಂಕಷ್ಟ ಚತುರ್ಥಿಯು ಅತ್ಯಂತ ಮಹತ್ವಪೂರ್ಣವಾಗಿದ್ದು ಈ ದಿನ ವೃತ ಕೈಗೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಚತುರ್ಥಿ ತಿಥಿಯು ಎ.19ರ ಸಂಜೆ 4.30 ಪ್ರಾರಂಭವಾಗಿ ಎ.20ರ ಮಧ್ಯಾಹ್ನ 1.55ರ ವರೆಗೆ ಇರಲಿದೆ. ಎ.19ರ ರಾತ್ರಿ 9.30 ನಂತರ ಚಂದ್ರೋದಯವಾಗಲಿದೆ.


ಅಂಗಾರಕ ಸಂಕಷ್ಟ ಚತುರ್ಥಿಯಂದು ವೃತ ಕೈಗೊಂಡರೆ ಇಡಿ ವರ್ಷ ವೃತ ಹಿಡಿದ ಫಲ ದೊರೆಯುವುದು ಎಂಬ ನಂಬಿಕೆಯಿದೆ. ಮುಂಜಾನೆ ಸ್ನಾನ ಮಾಡಿ ಗಣೇಶನಿಗೆ ಗರಿಕೆಯನ್ನು ಪ್ರಾರ್ಥಿಸಿ ವೃತ ಕೈಗೊಳ್ಳಬಹುದು. ದಿನಪೂರ್ತಿ ಉಪವಾಸವಿದ್ದು ಗಣೇಶನ ನಾಮಸ್ಮರಣೆ ಮಾಡಬೇಕು. ಸಂಜೆ ಸಮೀಪದ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನ ದರ್ಶನ ಪಡೆಯಿರಿ. ರಾತ್ರಿ ಚಂದ್ರದರ್ಶನ ಮಾಡಿ ವೃತ ಮುಕ್ತಾಯಗೊಳಿಸಬಹುದು.

Pages