ಮುಂಬೈ / ಕುಂದಾಪುರ : ಚೇರ್ಕಾಡಿ ದೊಡ್ಡಮನೆ ದಿವಂಗತ ತೇಜಪ್ಪ ಹೆಗ್ಡೆ ಹಾಗೂ ಕೆಂಜೂರು ನಾಯಕರ ಮನೆ ದಿವಂಗತ ದಾರಮ್ಮ ಶೆಡ್ತಿಯವರ ಸುಪುತ್ರ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ. ನಾಗಯ್ಯ ಶೆಟ್ಟಿ ಜ. 28ರ ಬೆಳಗ್ಗೆ ಮುಂಬಯಿಯಲ್ಲಿ ನಿಧನರಾದರು.
ಇವರು ನಿವೃತ್ತಿ ನಂತರ ಮಗಳೊಂದಿಗೆ ಮುಂಬೈನಲ್ಲಿ ವಾಸವಾಗಿದ್ದರು. ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಮೃತರು ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ, ಅಪಾರ ಬಂಧು-ಬಳಗ ಹಾಗೂ ಮಿತ್ರರನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಹಾಗೂ ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಸಿರಿಮುಡಿ ಶ್ರೀ ಮಹಾಲಿಂಗೇಶ್ವರ ದೇವರು ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇವೆ. (ಅಶೋಕ್ ಕುಮಾರ್ ಶೆಟ್ಟಿ)