ಮಂಗಳೂರು : ದುಬೈ ಉದ್ಯಮಿ ವಕ್ವಾಡಿ ಪವೀಣ್ ಶೆಟ್ಟಿ ಅವರು ಈ ಭಾರಿಯ 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
![](https://blogger.googleusercontent.com/img/b/R29vZ2xl/AVvXsEiRdi8MdKCw0cXgODZlYVxNwjhcUXo493NEUtiZIRZi0Jzv33dCN9JxaEjnzbEfOemKiTqoUpQ4R9m3lPsLQ13RKC1PyHW0Hdujcgr4VmYear1wLFkcyElngeiXLcEh6ZV7Rd6Jyn0SY017/s16000/IMG_20211031_191654.jpg)
![](https://blogger.googleusercontent.com/img/b/R29vZ2xl/AVvXsEgHP69HhxBBzuKC8pzlx4t3fqaI_Gn620l3C8TLnjCdJdi5f4g5aj-U2WJlv07W21IYHDYAiDBxrROjfeDLxHSd98Mn-Mn5Q25gGm-4a1vmGFnDx5DboqG2Vel-pNV_O3hfBO8YBBoZRFin/s16000/IMG_20211031_191654.jpg)
ದುಬೈನ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಚೇರ್ಮನ್ ಆಗಿರುವ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನಾಡು ನುಡಿಯ ಸೇವೆಯಲ್ಲಿ ಸದಾ ಮುಂದಿರುವ ಪ್ರಮುಖರಲ್ಲಿ ಓರ್ವರಾಗಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುವ ಕನ್ನಡ ಪರ ಕಾರ್ಯಕ್ರಮಗಳ ಮಹಾನ್ ಪೋಷಕರಾಗಿ, ಸಂಘಟಕರಾಗಿ ಕನ್ನಡ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ಗಾರೆ.
ಜೊತೆಗೆ ತಮ್ಮ ಉದ್ಯಮದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗದಾತರಾಗಿದ್ದಾರೆ. ಸಮಾಜಸೇವಕರಾಗಿ ಹಲವು ಮಂದಿಯ ಬಾಳಿಗೆ ಬೆಳಕಾಗಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾನ್ ಪೋಷಕರಾಗಿ ಒಕ್ಕೂಟ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.
ವಕ್ವಾಡಿ ಪ್ರವೀಣ್ ಶೆಟ್ಟಿಯವರ ಸಮಾಜಸೇವೆ, ಕನ್ನಡ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2021ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿದೆ.