ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಂಟರ ಸಮುದಾಯವನ್ನು 2ಎ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.
![](https://blogger.googleusercontent.com/img/b/R29vZ2xl/AVvXsEgeFLCPdf6L3I5x6-WJd1HdBCJ03TmtKTyWdZxGtZZ09FBwbp1_Yabbhr3SrnMNWQyCaWNjsTiIbxaryNi8rNyWrFMf4YacBlrRQqucPId_fVUfKkyUxtqanZWZjJEZDjY4J8geLNUL3iiX/s16000/IMG_20211015_192011_copy_640x427.jpg)
![](https://blogger.googleusercontent.com/img/b/R29vZ2xl/AVvXsEiL6bpWxSAaCAlMnp_ozPRuWenc1X9DDiAREjzKEBmzhaHw8iiAymz0EcjWlHgdo6JjVw-k4AiRi9MVhtZJ0I6jhMvy1kjTKW4jIcDDhLYtVsgMqGJAE5vitSYFR16pSgezKp9gbivMieAm/s16000/IMG_20211015_192011_copy_640x427.jpg)
ಮಾನ್ಯ ಮುಖ್ಯಮಂತ್ರಿಗಳು ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕ ಬೆಂಬಲವನ್ನು ನೀಡಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡಿದರು.
ಬಂಟ ಸಮುದಾಯವು ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದು ಕಂಡರು ಬಹಳಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟದಲ್ಲಿದ್ದು ಆರ್ಥಿಕವಾಗಿ ಅಸಮರ್ಥರಾಗಿದ್ದಾರೆ. ಇವರ ಜೀವನ ಸುಧಾರಣೆಗೆ ಮತ್ತು ಶಿಕ್ಷಣ ಉದ್ಯೋಗ ಎಂಬಿತ್ಯಾದಿ ಸಮಸ್ಯೆಗಳ ನಿವಾರಣೆಗಾಗಿ ಬಂಟ ಸಮುದಾಯವನ್ನು 2ಂ ಗೆ ಸೇರ್ಪಡೆ ಗೊಳಿಸಬೇಕಾದ ಅವಶ್ಯಕತೆ ಇದೆ ಎಂಬ ವಿಚಾರವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಐಕಳ ಹರೀಶ್ ಶೆಟ್ಟಿ ಅವರು, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಇವರ ಜೊತೆಗೆ ಒಕ್ಕೂಟದ ನಿರ್ದೇಶಕರಾದ ಕೆ ಪ್ರಕಾಶ್ ಶೆಟ್ಟಿ, ಮತ್ತು ಸಂತೋಷ್ ಶೆಟ್ಟಿ ಇನ್ನಾ, ಸುರೇಶ್ ಶೆಟ್ಟಿ ಗುರ್ಮೆ ಜೊತೆಯಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ವಿಷಯಗಳ ತಿಳುವಳಿಕೆ ಮೂಡಿಸಿದರು.
ಈ ಸಂದರ್ಭ ಸಕರಾಮ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ , ಅಶೋಕ್ ಶೆಟ್ಟಿ ಜೊತೆಗಿದ್ದರು.